ಆಹಾರದಲ್ಲಿ ವಿಷ ಬೆರೆಸಿ ಐದು ನಾಯಿಮರಿಗಳನ್ನು ಕೊಂದ್ರು

Public TV
1 Min Read

ಕೋಲ್ಕತ್ತಾ: ಆಹಾರದಲ್ಲಿ ವಿಷ ಬೆರೆಸಿ ಐದು ನಾಯಿಮರಿಗಳನ್ನು ಕೊಂದಿರುವ ಘಟನೆ ಉತ್ತರ ಕೋಲ್ಕತ್ತಾದ ಶೋಭಾಬಜಾರ್ ಪ್ರದೇಶದಲ್ಲಿ ಬುಧವಾರ ನಡೆದಿದೆ.

ಸ್ಥಳೀಯರು ನಾಯಿಮರಿಗಳು ಫುಟ್‍ಪಾತ್‍ನಲ್ಲಿ ಮೃತಪಟ್ಟಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ

DOG

“ನಾಯಿ ಮರಿಗಳಿಗೆ ಅನೇಕ ಮಂದಿ ಆಹಾರವನ್ನು ನೀಡುತ್ತಾರೆ. ಹೀಗಾಗಿ ಅವುಗಳನ್ನು ಯಾರು ಕೊಂದಿರಬಹುದು ಎಂಬುವುದರ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಇದೀಗ ಈ ಸಂಬಂಧ ತನಿಖೆಯನ್ನು ಪ್ರಾರಂಭಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ತಿಂಗಳ ಆರಂಭದಲ್ಲಿ ಕೂಯೂ ಪ್ರಾಣಿಗಳಿಗೆ ಕ್ರೌರ್ಯ ಮೆರೆದಿರುವ ಘಟನೆಗಳು ವರದಿಯಾಗಿವೆ. ಹೌರಾ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ದೀಪಾವಳಿ ಹಬ್ಬದ ವೇಳೆ ಬೀದಿ ನಾಯಿಗಳಿಗೆ ವಿಷ ಬೆರೆಸಿದ ಆಹಾರ ನೀಡಲು ಯತ್ನಿಸಿದ್ದರು. ಆದರೆ, ಅದೃಷ್ಟವಶಾತ್ ಶ್ವಾನಗಳು ಬದುಕುಳಿದವು. ಇದನ್ನೂ ಓದಿ: ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಿದ ಪೊಲೀಸ್ – ವೀಡಿಯೋ ವೈರಲ್

ಮತ್ತೊಂದೆಡೆ ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಖರಗ್‍ಪುರದಲ್ಲಿ ನಾಯಿಯೊಂದರ ಕಾಲಿಗೆ ಅಪರಿಚಿತರು ಪಟಾಕಿ ಕಟ್ಟಿ ಸಿಡಿಸಿದ್ದರು. ಇದರಿಂದ ಶ್ವಾನ ಕೈಕಾಲುಗಳ ಒಂದು ಭಾಗವನ್ನು ಕಳೆದುಕೊಂಡು ಗಂಭೀರವಾಗಿ ಗಾಯಗೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *