ರಸ್ತೆ ಅಗಲೀಕರಣದ ವೇಳೆ ಧಗಧಗನೇ ಹೊತ್ತಿ ಉರಿದ ಹಿಟಾಚಿ!

Public TV
1 Min Read

ಬೀದರ್: ಕೆಲಸ ಮಾಡುತ್ತಿದ್ದ ಹಿಟಾಚಿಗೆ ಏಕಾಏಕಿ ಬೆಂಕಿ ತಗುಲಿ ಧಗ ಧಗ ಉರಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಭಂಡಾರಕುಮಠಾ ಗ್ರಾಮದ ಬಳಿ ನಡೆದಿದೆ.

ಜ್ಯೋತಿ ಕನ್ ಸ್ಟ್ರಕ್ಷನ್ ಮಾಲೀಕ ಮತ್ತು ಗುತ್ತಿಗೆದಾರ ಸೂರ್ಯಕಾಂತ ಅಲ್ಮಾಜೆ ಅವರಿಗೆ ಸೇರಿದ ಯಂತ್ರ ಇದಾಗಿದೆ. ಖೆರ್ಡಾ-ಡೊಂಗರಗಾಂವ ರಸ್ತೆ ಅಗಲೀಕರಣ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಹಿಟಾಚಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಚಾಲಕ ವಾಹನದಿಂದ ಕೆಳಗಿಳಿದಿದ್ದು, ಅಷ್ಟರಲ್ಲಾಗಲೇ ಯಂತ್ರ ಧಗಧಗನೆ ಬೆಂಕಿಗಾಹುತಿಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಹೊತ್ತಿ ಉರಿದ ಹಿಟಾಚಿಯ ಬೆಂಕಿ ನಂದಿಸಲು ಅಗ್ನಿ ಶಾಮಕ ವಾಹನ ತಡವಾಗಿ ಬಂದಿದ್ದರೂ ಪ್ರಯೋಜನವಾಗಿಲ್ಲ. ಘಟನೆಯಿಂದಾಗಿ ಯಾವುದೇ ಜೀವ ಹಾನಿಯಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.

https://www.youtube.com/watch?v=we0Kngz_5Eg

Share This Article
Leave a Comment

Leave a Reply

Your email address will not be published. Required fields are marked *