ರಸ್ತೆ ಜಾಗದಲ್ಲಿ ಮನೆ ನಿರ್ಮಾಣ- 1 ವರ್ಷದಿಂದ ಗ್ರಾಮಸ್ಥರ ಕಚ್ಚಾಟ

Public TV
1 Min Read

ತುಮಕೂರು: ಒಂದು ವರ್ಷದಿಂದ ಜಿಲ್ಲೆಯ ಶಿರಾ ತಾಲೂಕಿನ ದೇವರಹಳ್ಳಿಯ ಜನರು ನೆಮ್ಮದಿಯಿಂದ ಬದುಕುತ್ತಿಲ್ಲ. ಹಗಲು ರಾತ್ರಿ ಎನ್ನದೆ ಬರೀ ಜಗಳ, ಘರ್ಷಣೆಯಿಂಟ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಒಬ್ಬರ ಮುಖ ಇನ್ನೊಬ್ಬರು ನೊಡದಷ್ಟು ಕಡು ಕೋಪಿಷ್ಟರಾಗಿದ್ದಾರೆ.

ಹೌದು. ದೇವರಹಳ್ಳಿಯಲ್ಲಿ ಲಕ್ಕಮ್ಮ ಕುದುರಪ್ಪ ಎಂಬವರಿಗೆ ಮನೆ ನಿರ್ಮಾಣವಾಗುತ್ತಿದೆ. ಆದರೆ ಲಕ್ಕಮ್ಮ ಕುದುರಪ್ಪ, ರಸ್ತೆ ಜಾಗ ಒತ್ತುವರಿ ಮಾಡ್ಕೊಂಡು ಮನೆ ಕಟ್ಟುತ್ತಿದ್ದಾರೆ. ಗ್ರಾಮಸ್ಥರು ಮೊದಲೇ ಎಚ್ಚರ ನೀಡಿದ್ದರೂ ಲಕ್ಕಮ್ಮ ಕುಟುಂಬ ಕ್ಯಾರೇ ಎನ್ನದೆ ಮನೆ ಕಟ್ಟಲು ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೂ ಗ್ರಾಮಸ್ಥರ ನಡುವೆ ದಿನನಿತ್ಯವೂ ಗಲಾಟೆ ನಡೆಯುತ್ತಲೇ ಇದೆ ಎಂದು ಸ್ಥಳೀಯ ನಿವಾಸಿ ಮಹಂತೇಶ್ ತಿಳಿಸಿದ್ದಾರೆ.

ಅಕ್ರಮ ಮನೆ ನಿರ್ಮಾಣದ ಬಗ್ಗೆ ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ರೂ ಕ್ರಮ ಕೈಗೊಂಡಿಲ್ಲ. ಈಗ ಊರಿನ ಪರಿಸ್ಥಿತಿ ಅರಿತ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿದ್ದಾರೆ. ಲಕ್ಕಮ್ಮ ಕುಟುಂಬದ ಮನೆ ಸೇರಿದಂತೆ ರಸ್ತೆ ಒತ್ತುವರಿ ಮಾಡಿಕೊಂಡು ಕಟ್ಟಿದ ಇತರರ ಮನೆಗಳನ್ನೂ ತೆರವುಗೊಳಿಸಲು ನಿರ್ಧರಿಸಲಾಗಿದೆ. ಸದ್ಯ ಮೋಹನ್ ಕುಮಾರ್ ಭೇಟಿ ಬಳಿಕ ಗ್ರಾಮದಲ್ಲಿ ಸ್ವಲ್ಪ ಮಟ್ಟಿಗೆ ಶಾಂತಿ ನೆಲೆಸಿದೆ.

Share This Article
Leave a Comment

Leave a Reply

Your email address will not be published. Required fields are marked *