ಶಾಸಕರ ಮುಸುಕಿನ ಗುದ್ದಾಟದಿಂದ ಅಧಿಕಾರಿಗಳಿಲ್ಲದೆ ಅನಾಥವಾದ ಚಿಕ್ಕಬಳ್ಳಾಪುರ ಜಿಲ್ಲೆ

Public TV
1 Min Read

ಚಿಕ್ಕಬಳ್ಳಾಪುರ: ಸಿಎಂ ಸಿದ್ಧರಾಮಯ್ಯ ಅವರ ಆಪ್ತ ಶಾಸಕರ ಮುಸುಕಿನ ಗುದ್ದಾಟದಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಅಧಿಕಾರಿಗಳಿಲ್ಲದೆ ಅನಾಥವಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ಆಡಳಿತ ನಡೆಸಬೇಕಾದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೂ ಇಲ್ಲಿಲ್ಲ. ಸಿಇಓ ವರ್ಗಾವಣೆ ಆಗಿ 4 ತಿಂಗಳುಗಳೇ ಕಳೆದಿದೆ. ಮತ್ತೊಂದೆಡೆ ತರಬೇತಿಗೆಂದು ಹೋಗಿ ತಿಂಗಳಾದರೂ ಜಿಲ್ಲಾಧಿಕಾರಿಯ ಸುಳಿವಿಲ್ಲ. ಇದರ ಜೊತೆಗೆ ಜಿಲ್ಲೆಯ ಹಲವು ಇಲಾಖೆಗಳಲ್ಲೂ ಅಧಿಕಾರಿಗಳಿಲ್ಲದೆ ಕೆಲಸಗಳು ಬಾಕಿ ಉಳಿದಿವೆ.

ಚಿಕ್ಕಬಳ್ಳಾಪುರ ಶಾಸಕ ಡಾ. ಕೆ.ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಎನ್.ಹೆಚ್ ಶಿವಶಂಕರ ರೆಡ್ಡಿ ವೈಮನಸ್ಸಿನಿಂದಾಗಿ ಅಧಿಕಾರಿಗಳು ಇತ್ತ ಕಡೆ ತಲೆ ಹಾಕುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇವರು ಹೇಳಿದ್ದು ಮಾಡಿದರೆ ಅವರಿಗೆ ಕೋಪ. ಅವರು ಹೇಳಿದ್ದು ಮಾಡಿದರೆ ಇವರಿಗೆ ಕೋಪ. ಇಬ್ಬರ ಸಹವಾಸವೇ ಬೇಡ ಎಂದು ಅಧಿಕಾರಿಗಳು ಚಿಕ್ಕಬಳ್ಳಾಪುರದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *