ಬಳ್ಳಾರಿ ಬಿಜೆಪಿಯಲ್ಲಿ ಭಿನ್ನಮತ – ಬಿಎಸ್‍ವೈ, ಈಶ್ವರಪ್ಪ ಬೆಂಬಲಿಗರ ಕಿತ್ತಾಟ

Public TV
0 Min Read

ಬಳ್ಳಾರಿ: ಬಿಜೆಪಿಯಲ್ಲಿ ಯಡಿಯೂರಪ್ಪ, ಈಶ್ವರಪ್ಪ ವೈಮನಸ್ಸು ಸದ್ಯಕ್ಕೆ ಶಾಂತವಾಗಿದೆ. ಆದ್ರೆ ಗಣಿನಾಡು ಬಳ್ಳಾರಿಯಲ್ಲಿ ಇವರಿಬ್ಬರ ಬೆಂಬಲಿಗರ ಮಧ್ಯೆಯೇ ಹೋರಾಟ ಶುರುವಾಗಿದೆ.

ಬಿಎಸ್‍ವೈ ಪರಮಾಪ್ತ ಹಾಗೂ ಶ್ರೀರಾಮುಲು ಬಣದಲ್ಲಿ ಗುರುತಿಸಿಕೊಂಡಿದ್ದ ಹೂವಿನಹಡಗಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನದಿಂದ ವಿಜಯಕುಮಾರ್‍ ರನ್ನ ಈಶ್ವರಪ್ಪ ಬಣದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಕೆಳಗಿಳಿಸಿದ್ದಾರೆ.

ಇದರಿಂದ ರೊಚ್ಚಿಗೆದ್ದಿರುವ ಬಿಎಸ್‍ವೈ ಮತ್ತು ವಿಜಯಕುಮಾರ್ ಅಭಿಮಾನಿಗಳು ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧವೇ ಪ್ರತಿಭಟನೆ ನಡೆಸಿದ್ದಾರೆ.  ವಿಜಯಕುಮಾರ್‍ರನ್ನ ಮುಂದುವರಿಸದಿದ್ದಲ್ಲಿ ಸಾಮೂಹಿಕ ರಾಜೀನಾಮೆ ನೀಡೋದಾಗಿ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *