ರೇಣುಕಾಚಾರ್ಯ ಹೇಳಿಕೆಯಲ್ಲಿ ತಪ್ಪಿಲ್ಲ ಎಂದ ಹೆಚ್ ಆಂಜನೇಯ

Public TV
1 Min Read

ಕೊಪ್ಪಳ: ಹೆಣ್ಣು ಮಕ್ಕಳ ಉಡುಪುಗಳೇ ಪ್ರಚೋದನೆಗೆ ಕಾರಣ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಮಾಜಿ ಸಚಿವ ಎಚ್ ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ.

ಕಾಲೇಜು ಮುಂದೆ ಹೋಗಿ ನೋಡಿ ಮುಸ್ಲಿಂ ಹೆಣ್ಣು ಮಕ್ಕಳ ಉಡುಪು ಪ್ರಚೋದನೆ ಕೊಡುತ್ತೋ ಅಥವಾ ನಮ್ಮ ಮಕ್ಕಳ ಉಡುಪು ಪ್ರಚೋದನೆ ಕೊಡುತ್ತೋ ಎಂದು. ರೇಣುಕಾಚಾರ್ಯ ಬಹಳ ಒಳ್ಳೇ ಮಾತು ಹೇಳಿದ್ದಾರೆ ಎಂದು ಆಂಜನೇಯ ಪರೋಕ್ಷವಾಗಿ ಹಿಜಬ್‍ಗೆ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ: ರೇಣುಕಾಚಾರ್ಯ

ಮುಸ್ಲಿಂ ಮಹಿಳೆಯರು ಹಿಜಬ್ ಧರಿಸುತ್ತಾರೆ ಹೀಗಾಗಿ ಅವರನ್ನು ಯಾರೂ ನೋಡಲ್ಲ. ಮೊದಲು ಚುನಾವಣೆಗೆ ಗಲಾಟೆ ನಡೆಯುತ್ತಿತ್ತು. ಇದೀಗ ಕಾಲೇಜು ಮಕ್ಕಳು ಬೀದಿಗಿಳಿದಿದ್ದಾರೆ. ಮಕ್ಕಳ ಕೈಯಲ್ಲಿ ಕಲ್ಲು, ಚಾಕು ಕೊಟ್ಟಿರುವುದು ಬಿಜೆಪಿಯವರು ಎಂದು ಹೇಳಿದರು.

ನಾವು ಎತ್ತಿ ಕಟ್ಟೋ ಕೆಲಸ ಮಾಡಲ್ಲ. ಇದು ಬಿಜೆಪಿಯವರು ಮಾಡಿದ್ದು. ನಾವು ಅವರ ಹಿಂದಿದ್ದರೆ ಅವರಿಗೆ ಕಾಂಗ್ರೆಸ್ ಧ್ವಜ ಕೊಡುತ್ತಿದ್ದೆವು. ಹಿಜಬ್ ಗಲಾಟೆಗೆ ಬಿಜೆಪಿ ಕಾರಣ ಎಂದರು. ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ ರೇಣುಕಾಚಾರ್ಯ

ಮೊದಲು ಇದ್ದ ಪದ್ಧತಿಯೇ ಮುಂದೆಯೂ ಇರಲಿ. ಅವರು ನೂರಾರು ವರ್ಷಗಳಿಂದ ಹೇಗೆ ಇದ್ದರು ಹಾಗೇ ಇರಲಿ. ಬಟ್ಟೆ ಇದನ್ನೇ ಹಾಕಬೇಕು ಎನ್ನುವುದು ಯಾವ ನ್ಯಾಯ? ಬಿಜೆಪಿಯವರು ಶಾಲು, ಪೇಟಾ ವಿತರಣೆ ಮಾಡಿದ್ದಾರೆ ಎಂದು ಆಂಜನೇಯ ಆರೋಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *