ಮಗನ ಮೇಲೆ ಹಲ್ಲೆ ತಡೆಯಲು ಬಂದು ಅಪ್ಪನೇ ಹೆಣವಾದ್ರು- ಹುಬ್ಬಳ್ಳಿಯಲ್ಲೊಂದು ಘೋರ ಘಟನೆ

Public TV
1 Min Read

ಹುಬ್ಬಳ್ಳಿ: ಬೈಕ್ ಕಳ್ಳತನ ಮಾಡಿದ್ದ ಮಗನ ಮೇಲೆ ಹಲ್ಲೆ ಮಾಡುವಾಗ ಅಡ್ಡ ಬಂದ ತಂದೆಯ ಕೊಲೆಯಾಗಿರುವ ಘಟನೆ ಹುಬ್ಬಳ್ಳಿಯ ಕೆಬಿ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾರ್ ಚಾಲಕನಾಗಿ ಕೆಲಸ ಮಾಡುತಿದ್ದ 45 ವರ್ಷದ ತಿರುಪತಿ ಅವರ ಮಗ ಶ್ರೀನಿವಾಸ ಬೈಕ್‍ವೊಂದನ್ನು ಕಳ್ಳತನ ಮಾಡಿದ್ದ. ಇದೇ ಕಾರಣಕ್ಕೆ ಬೈಕ್ ಮಾಲೀಕ ಮತ್ತು ಆತನ ಸ್ನೇಹಿತರು ಸೇರಿ ಶ್ರೀನಿವಾಸನ ಮನೆಗೆ ಬಂದು ಹಲ್ಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಈ ವೇಳೆ ಅಲ್ಲೆ ಇದ್ದ ತಂದೆ ಮಗನನ್ನು ಬಿಡಿಸಲು ಬಂದಾಗ ದುಷ್ಕರ್ಮಿಗಳು ಶ್ರೀನಿವಾಸನ ತಂದೆ ತಿರುಪತಿ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕೂಡಲೇ ತಿರುಪತಿ ಅವರನ್ನು ಕಿಮ್ಸ್ ಗೆ ದಾಖಲು ಮಾಡಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸದೆ ತಿರುಪತಿ ಸಾವಿಗೀಡಾಗಿದ್ದಾರೆ.

ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *