ಬೆಳಗಾವಿ: ಕೈಹಿಡಿದು ಬಾಳಪೂರ್ತಿ ಜೀವನ ಸಂಗಾತಿಯಾಗಿರುವೆ ಎಂದು ಸಪ್ತಪದಿ ತುಳಿದ ಹೆಂಡತಿಯೇ ಗಂಡನನ್ನು ಕೊಲ್ಲಿಸಲು ಸುಪಾರಿ ನೀಡಿದ ಭಯಾನಟಕ ಘಟನೆ ಬೆಳಗಾವಿಯ ಗೋಕಾಕ ಹೊರವಲಯದ ಕಡಬಗಟ್ಟಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ಗೋಕಾಕ ತಾಲೂಕಿನ ಕೈತನಾಳ ಹೊಸೂರು ಗ್ರಾಮದ ಕೆಂಚಪ್ಪಾ ನೊಗನಿಹಾಳ ತನ್ನ ಪತ್ನಿ ಗೌರವ್ವಾ ನೊಗನಿಹಾಳ ಹಾಕಿದ ಮರ್ಡರ್ ಸ್ಕೆಚ್ಗೆ ಬಲಿಯಾಗಿದ್ದಾನೆ. ಕೊಲೆಯಾದ ಕೆಂಚಪ್ಪಾ ಮಗಳು ಸಿದ್ದವ್ವಾ ಕಟ್ಟಿಕಾರ, ಪತ್ನಿ ಗೌರಮ್ಮ ನೋಗನಿಹಾಳ ಸೇರಿ 70 ಸಾವಿರ ಸುಪಾರಿ ನೀಡಿ ಕೊಲೆಮಾಡಿಸಿದ್ದಾರೆ.
ಮನೆ ಯಜಮಾನ ಮಿಸ್ಸಿಂಗ್ ಆಗಿದ್ದಾನೆ ಎಂದು ಊರಲ್ಲಿ ಸುದ್ದಿ ಹರಡಿಸಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಪಾಪಿ ಪತ್ನಿ ಗೌರವ್ವ ಯತ್ನಿಸಿದ್ದಾಳೆ. ಆದ್ರೆ ಊರ ತುಂಬೆಲ್ಲಾ ಕೆಂಚಪ್ಪಾ ಕಾಣೆಯಾಗಿಲ್ಲ ಬದಲಾಗಿ ಕೊಲೆಯಾಗಿದ್ದಾನೆ ಎಂಬ ಗುಸು ಗುಸು ಸುದ್ದಿ ಹರಡಿತ್ತು. ಸಂಶಯದ ಮೆರೆಗೆ ಕೆಂಚಪ್ಪಾ ಸಹೋದರ ವಿಠ್ಠಲ ಪೊಲೀಸ್ ಠಾಣೆಗೆ ದೂರು ಕೊಟ್ಟರು. ತನಿಖೆ ಆರಂಭಿಸಿದ ಗೋಕಾಕ ಗ್ರಾಮೀಣ ಪೋಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ.
ಪ್ರಕಣದಲ್ಲಿ ಸುಪಾರಿ ಪಡೆದ ಪ್ರಮೂಖ ಆರೋಪಿ ಶಿವಾಜಿ ಹೊಳೆವ್ವಗೋಳ, ಶಂಕರ ದೇಶಿಂಗೆ, ದುರ್ಗಪ್ಪಾ ನಂದಿ, ರಾಮಸಿದ್ದದ್ದಪ್ಪ ನಂದಿ, ಗೌರವ್ವಾ ನೊಗನಿಹಾಳ ಹಾಗೂ ಸಿದ್ದವ್ವ ಕಟ್ಟಿಕಾರಳನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಒಟ್ಟಾರೆ ಪತ್ನಿ ಗೌರವ್ವ, ಮಗಳ ನೀಚ ಕೆಲಸಕ್ಕೆ ಅಪ್ಪ ಸಹಕರಿಸಲಿಲ್ಲ ಅಂತ ಸುಪಾರಿ ಕೊಟ್ಟು ಮುಗಿಸಿರುವುದು ಬೆಳಕಿಗೆ ಬಂದಿದೆ.