ರುಬ್ಬುವ ಕಲ್ಲು ಎತ್ತಿ ಹಾಕಿ ತಂದೆಯಿಂದಲೇ ಮಗನ ಬರ್ಬರ ಹತ್ಯೆ!

Public TV
1 Min Read

ಕಾರವಾರ: ಮನೆಗೆ ಹಣ ನೀಡುತ್ತಿಲ್ಲ ಎಂದು ಆರೋಪಿಸಿ ತಂದೆಯೇ ಮಗನನ್ನು ಕೊಲೆ ಮಾಡಿದ ಅಮಾನುಷ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದಿದೆ.

ಈ ಘಟನೆ ಅಂಕೋಲಾ ತಾಲೂಕಿನ ಹಾರವಾಡ ಸೀಬರ್ಡ್ ಕಾಲೋನಿಯಲ್ಲಿ ನಡೆದಿದೆ. ವಿನೋದ ಪಾಂಡುರಂಗ ಹರಿಕಂತ್ರ (20) ಎಂಬಾತನ್ನು ತಂದೆ ಪಾಂಡುರಂಗ ನಾರಾಯಣ ಹರಿಕಂತ್ರ (45) ಕೊಲೆ ಮಾಡಿದ್ದಾನೆ.

ವಿನೋದ್ ಮೊರಬದ ಅಜ್ಜಿ ಮನೆಯಲ್ಲಿದ್ದು, ಎರಡು ತಿಂಗಳ ಹಿಂದೆಯಿಂದಷ್ಟೇ ಮನೆಯಲ್ಲಿಯೇ ಪೋಷಕರ ಜೊತೆ ಉಳಿದುಕೊಂಡಿದ್ದನು. ಹೀಗಾಗಿ ಮನೆಗೆ ಹಣ ನೀಡುತ್ತಿಲ್ಲ ಎಂದು ಸಿಟ್ಟುಗೊಂಡ ತಂದೆ ನಾರಾಯಣ ತನ್ನ ಮಗ ವಿನೋದನ ತಲೆ ಮೇಲೆ ರುಬ್ಬುವ ಕಲ್ಲನ್ನು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.

ಸದ್ಯ ಆರೋಪಿ ತಂದೆಯನ್ನು ಅಂಕೋಲಾ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *