ತಂದೆ ಮಗನ ಗಲಾಟೆ ಕೊಲೆಯಲ್ಲಿ ಅಂತ್ಯ

Public TV
1 Min Read

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ತಂದೆ ಮಗನ ನಡುವೆ ಆರಂಭವಾದ ಗಲಾಟೆ ಮಗನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾಮಾಕ್ಷಿ ಪಾಳ್ಯದಲ್ಲಿ ನಡೆದಿದೆ.

ಕೊಲೆಯಾದ ಸಂತೋಷ್ ಮತ್ತು ಆತನ ತಂದೆ ಗುರುರಾಜ್ ಇಬ್ಬರು ಆರ್​ಟಿಓ ಏಜೆಂಟ್‍ಗಳಾಗಿ ಕೆಲಸ ಮಾಡಿಕೊಂಡಿದ್ದರು. ಸಂತೋಷ್ ಇತ್ತೀಚೆಗೆ ಸ್ನೇಹಿತರೊಂದಿಗೆ ಪ್ರವಾಸ ಹೋಗಿ ಬಂದಿದ್ದರು. ಇದು ತಂದೆ ಗುರುರಾಜ್‍ಗೆ ಕೋಪ ತರಿಸಿತ್ತು. ಸಂತೋಷ್ ಪ್ರವಾಸ ಮುಗಿಸಿ ಮನೆಗೆ ಬಂದ ಬಳಿಕ ಸರಿಯಾಗಿ ಕೆಲಸ ಮಾಡಲ್ಲ ಯಾವಾಗ ಬೇಕು ಆಗ ಕೆಲಸ ಬಿಟ್ಟು ಹೋಗಿ ಬಿಡುತ್ತಿಯಾ ಎಂದು ಗುರುರಾಜ್ ಮಗ ಸಂತೋಷ್‍ಗೆ ಬೈದಿದ್ದಾರೆ. ಇದನ್ನೂ ಓದಿ: ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಕ್ಷಾಮ ಆತಂಕ – ರಾಜ್ಯದ 3 ಸ್ಥಾವರಗಳ ಅರ್ಧಕ್ಕರ್ಧ ಘಟಕಗಳು ಬಂದ್

ತಂದೆ ಮಗನ ಮಧ್ಯೆ ಗಲಾಟೆ ವಿಕೋಪಕ್ಕೆ ತಿರುಗಿ ಗುರುರಾಜ್ ಮಗ ಸಂತೋಷ್ ಎದೆಯ ಭಾಗಕ್ಕೆ ಚಾಕುವಿನಿಂದ ಬಲವಾಗಿ ಚುಚ್ಚಿದ್ದಾರೆ. ಪರಿಣಾಮ ರಕ್ತಸ್ರಾವವಾಗಿ ಮಗ ಸಂತೋಷ್ ಪ್ರಾಣ ಬಿಟ್ಟಿದ್ದಾರೆ. ಘಟನೆ ಸಂಬಂಧ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಆರೋಪಿ ಗುರುರಾಜ್‍ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಿತು ರಾಜ್ ಅವಸ್ಥಿ ಪ್ರಮಾಣ ವಚನ ಸ್ವೀಕಾರ

 

 

Share This Article
Leave a Comment

Leave a Reply

Your email address will not be published. Required fields are marked *