ದೀಪದ ಕೆಳಗೆ ಕತ್ತಲು: ಪರಿಹಾರವಿಲ್ಲದೆ ಆತ್ಮಹತ್ಯೆ ಬೆದರಿಕೆಯೊಡ್ಡಿದ ವೈಟಿಪಿಎಸ್ ಭೂಸಂತ್ರಸ್ತರು

Public TV
1 Min Read

ರಾಯಚೂರು : ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕೆ ಆಗ್ರಹಿಸಿ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವೈಟಿಪಿಎಸ್‍ನ ಒಂದನೇ ಘಟಕದ ವಾಣಿಜ್ಯಿಕ ಕಾರ್ಯಾರಂಭ ಹಿನ್ನೆಲೆ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ನಾಯಕ್ ವಿದ್ಯುತ್ ಕೇಂದ್ರಕ್ಕೆ ಆಗಮಿಸಿದ್ದರು ಈ ವೇಳೆ ಭೂಸಂತ್ರಸ್ತರಾದ ರಾಘವೇಂದ್ರ, ತಿಮ್ಮಪ್ಪ, ರಾಘವೇಂದ್ರ ಸಾಗರ್ ಹೈವೋಲ್ಟೇಜ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದರು.

ನಂತರ ಸೆಕ್ಯೂರಿಟಿ ಗಾರ್ಡ್‍ಗಳು ರೈತರನ್ನು ಮನವೊಲಿಸಿ ಕೆಳಗಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕುಮಾರ್ ನಾಯಕ್ ಈಗಾಗಗಲೇ 259 ಕುಟುಂಬಗಳಿಗೆ ಪರಿಹಾರ ನೀಡಿದ್ದೇವೆ. 78 ಜನರಿಗೆ ಉದ್ಯೋಗದ ತರಬೇತಿಯನ್ನೂ ಕೊಡುತ್ತಿದ್ದೇವೆ. ಉಳಿದ ರೈತರ ಮನವಿಯನ್ನ ಪರಿಗಣಿಸುತ್ತೇವೆ ಎಂದು ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *