3 ವರ್ಷಗಳಿಂದ ಕಬ್ಬಿನ ಬಾಕಿಯೇ ಕೊಟ್ಟಿಲ್ಲ- ಆಗಸ್ಟ್ 1ರಿಂದ ರೈತರ ಉಗ್ರ ಹೋರಾಟ

Public TV
1 Min Read

ಧಾರವಾಡ: ಸಚಿವರೊಬ್ಬರ ಕಾರ್ಖಾನೆಗೆ ತಾವು ಕಷ್ಟ ಪಟ್ಟು ಬೆಳೆದಿದ್ದ ಕಬ್ಬನ್ನು ಕೊಟ್ಟರೆ ಕಳೆದ ಮೂರು ವರ್ಷಗಳಿಂದ ರೈತರಿಗೆ ಕಬ್ಬಿನ ಬಾಕಿಯನ್ನೇ ನೀಡದೇ ಸತಾಯಿಸುತ್ತಿದ್ದಾರೆ.

ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಅವರ ಮಾಲೀಕತ್ವದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ರೈತರಿಂದ ಸುಮಾರು 80 ಕೋಟಿ ರೂಪಾಯಿ ಕಬ್ಬು ಖರೀದಿ ಮಾಡಿದೆ. ಆದರೆ ಕಳೆದ 3 ವರ್ಷಗಳಿಂದ ಬಾಕಿ ಹಣವನ್ನೇ ಕೊಟ್ಟಿಲ್ಲ. ಜಿಲ್ಲಾಡಳಿತಕ್ಕೂ ಸಚಿವರು ಸುಳ್ಳು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಸಚಿವರು ಬಾಕಿ ಬಿಲ್ ಪಾವತಿ ಮಾಡದೇ ಇದ್ರೆ ಆಗಸ್ಟ್ 1ರಿಂದ ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿರುವ ಚನ್ನಮ್ಮನ ಪ್ರತಿಮೆ ಎದುರು ಕುಟುಂಬ ಸಮೇತರಾಗಿ ಧರಣಿ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *