ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಯೇ ಹೊರತು, ಸಾಲದಿಂದಲ್ಲ: ಆತ್ಮಹತ್ಯೆಗೆ ಡಿಕೆಶಿ ವ್ಯಾಖ್ಯಾನ

Public TV
1 Min Read

ಬೆಂಗಳೂರು: ರೈತರು ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆಮಾಡಿಕೊಳ್ಳುತ್ತಿದ್ದಾರೆಯೇ ಹೊರತು, ಸಾಲದ ಸುಳಿಯಿಂದಲ್ಲ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೊಸ ವ್ಯಾಖ್ಯಾನ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿಯವರ ರೈತರ ಸಾಲಮನ್ನಾ ಬಳಿಕವೂ ರಾಜ್ಯದಲ್ಲಿ ನಡೆಯುತ್ತಿರುವ ರೈತರ ಸರಣಿ ಆತ್ಮಹತ್ಯೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ರೈತರು ಕೇವಲ ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಸಾಲದ ಸುಳಿಯಿಂದಲ್ಲ. ಸರ್ಕಾರ ಸಾಲಮನ್ನಾ ಮಾಡಿದರೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಸರ್ಕಾರ ನಿಮ್ಮ ಜೊತೆ ಇದೆ ಎಂದು ಹೇಳಿದರು.

ಯಾವುದೇ ವೈಯಕ್ತಿಕ ಸಮಸ್ಯೆಯಿಂದ ರೈತ ಸಾವನ್ನಪ್ಪಿದ್ದರೂ ಅದನ್ನು ಸಾಲದಿಂದಾಗಿ ಆತ್ಮಹತ್ಯೆ ಅಂತ ಬಿಂಬಿಸುತ್ತಿದ್ದಾರೆ. ಹೀಗಾಗಿ ಎಲ್ಲವೂ ಬೆಳೆ ಸಮಸ್ಯೆಯಿಂದಲೇ ರೈತರ ಆತ್ಮಹತ್ಯೆ ಎಂದು ಹೇಳಲು ಸಾಧ್ಯವಿಲ್ಲ. ನಾವು ವಾಹನಗಳಲ್ಲಿ ಹೋಗುತ್ತಿರುವಾಗ, ನಾವೇ ಅಪಘಾತ ಮಾಡಬೇಕಾಗಿಲ್ಲ, ಎದುರುಗಡೆಯವನು ಬಂದು ಅಪಘಾತ ಮಾಡಿದರೂ ಸಾವು ಸಂಭವಿಸುತ್ತೆ. ಎಲ್ಲದರ ಬಗ್ಗೆ ವರದಿ ನೋಡಿದ್ದೇನೆ, ಆದ್ದರಿಂದಲೇ ಮಾತನಾಡುತ್ತಿರುವುದು ಎಂದು ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗಿದ್ದ ಸಾಲಮನ್ನಾ ಕುರಿತು ಅನುಮಾನಗಳಿಗೆ ಮಂಗಳವಾರ ಬ್ಯಾಂಕ್ ಅಧಿಕಾರಿಗಳು ಸಭೆ ನಡೆಸಿ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *