ದೆಹಲಿಯ ರೈತ ಹೋರಾಟದ ಬಗ್ಗೆ ಜಾಗೃತಿಗೊಳಿಸಿ ಅಕ್ಟೋಬರ್ 2ರಿಂದ ಕಿಸಾನ್ ಸ್ವರಾಜ್ ಯಾತ್ರೆ

Public TV
1 Min Read

– ರೈತ ಮುಖಂಡರ ಎರಡನೇ ದಿನದ ಸಭೆಯಲ್ಲಿ ನಿರ್ಣಯ

ಚೆನ್ನೈ: ಕೇಂದ್ರ ಕೃಷಿ ಕಾಯ್ದೆಗಳ ಮಾರಕ ಪರಿಣಾಮಗಳು ಮತ್ತು ಎಂಎಸ್‍ಪಿ ಶಾಸನಬದ್ಧ ಖಾತ್ರಿ ಬೆಲೆ ಆಗಬೇಕು ಎನ್ನುವ ಬೇಡಿಕೆ ಈಡೇರಿಕೆಗಾಗಿ ರೈತ ಜಾಗೃತಿ ದೇಶವ್ಯಾಪಿ, ಕಿಸಾನ್ ಸ್ವರಾಜ್ ಯಾತ್ರೆ ಅಕ್ಟೋಬರ್ 2 ಗಾಂಧೀಜಯಂತಿಯ ದಿನದಿಂದ ಆರಂಭಿಸುವುದಾಗಿ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ರೈತ ಮುಖಂಡರ ಎರಡನೇ ದಿನದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ದೇಶಾದ್ಯಂತ ರೈತರನ್ನು ಜಾಗೃತಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ತರಲು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಅಕ್ಟೋಬರ್ 2 ಗಾಂಧಿ ಜಯಂತಿ ದಿನದಂದು ಕಿಸಾನ್ ಸ್ವರಾಜ್ ಯಾತ್ರೆ ನಡೆಸಲು ರಾಷ್ಟ್ರೀಯ ರೈತ ಮುಖಂಡರ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ನಿರ್ಣಯವನ್ನು ಸಂಯುಕ್ತ ಕಿಸಾನ್ ಮೋರ್ಚಾ ಸಮಿತಿಯ ಮುಂದೆ ಮಂಡಿಸಿ ಕಿಸಾನ್ ಯಾತ್ರೆಯ ಮಾರ್ಗಸೂಚಿ ಕಾರ್ಯಕ್ರಮಗಳನ್ನು ಯೋಚಿಸಲು ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಹಾಗೂ ಯದುವೀರ ಸಿಂಗ್ ರವರಿಗೆ ಜವಾಬ್ದಾರಿ ನೀಡಲಾಯಿತು. ಇದನ್ನೂ ಓದಿ: ದೇಶವ್ಯಾಪಿ ಹೋರಾಟ ನಡೆಸಲು ರೈತರ ಸಭೆ

2 ದಿನ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ರೈತ ಮುಖಂಡರ ಸಭೆಯಲ್ಲಿ ದೇಶವ್ಯಾಪಿ ರೈತರ ಸಮಸ್ಯೆ, ನೀರು ಬಳಕೆ ಪರಿಸರ ಸುರಕ್ಷತೆ ಸಮಸ್ಯೆ 9ತಿಂಗಳ ರೈತರ ಹೋರಾಟದ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು ನಿರ್ಣಯವನ್ನು ರಾಷ್ಟ್ರೀಯ ಜಲತಜ್ಞ ರಾಜೇಂದ್ರಸಿಂಗ್ ಸಭೆಯಲ್ಲಿ ಮಂಡಿಸಿದರು.

ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ದಿಕ್ಕುಗಳಿಂದ ಯಾತ್ರೆ ಆರಂಭಿಸಿ, ಯಾತ್ರೆ ದೆಹಲಿಯಲ್ಲಿ ಸಂಗಮವಾಗಲು ಯೋಚಿಸುತ್ತಿದ್ದೇವೆ. ದೇಶಾದ್ಯಂತ ಆರೂವರೆ ಲಕ್ಷ ಹಳ್ಳಿಗಳಿವೆ. ಪ್ರತಿ ಹಳ್ಳಿಯಿಂದ ಒಬ್ಬರು ಬಂದರೆ ಆರೂವರೆ ಲಕ್ಷ ಜನ ದೆಹಲಿಯಲ್ಲಿ ಸಂಗಮವಾಗಬಹುದು ಎಂಬುದನ್ನು ಅರಿತುಕೊಳ್ಳಬೇಕು ಎಂದು ರಾಕೇಶ್ ಟಿಕಾಯತ್ ತಿಳಿಸಿದರು. ಇದನ್ನೂ ಓದಿ: ಇನ್ಫಿ ಸಿಇಒ ಸಲೀಲ್ ಪರೇಖ್‍ಗೆ ಹಣಕಾಸು ಸಚಿವಾಲಯದಿಂದ ಸಮನ್ಸ್

ತಮಿಳುನಾಡಿನ ಜಂಟಿ ರೈತ ಸಂಘಟನೆಗಳ ಒಕ್ಕೂಟದ ಪರವಾಗಿ ಗುರುಸ್ವಾಮಿ, ಸಭೆಯಲ್ಲಿ ಭಾಗವಹಿಸಿದ ಎಲ್ಲಾ ರಾಷ್ಟ್ರೀಯ ರೈತ ಮುಖಂಡರಿಗೆ ಧನ್ಯವಾದ ಸಮರ್ಪಿಸಿದರು. ಕರ್ನಾಟಕ ರೈತ ಸಂಘಟನೆಗಳ ಮುಖಂಡರಾದ ಕೆ.ಟಿ ಗಂಗಾಧರ್, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಚುಕ್ಕಿನಂಜುಂಡಸ್ವಾಮಿ ಮುಂತಾದವರಿದ್ದರು.

Share This Article
Leave a Comment

Leave a Reply

Your email address will not be published. Required fields are marked *