ಜೀವನಾಧಾರವಾಗಿದ್ದ ಎಮ್ಮೆಗಳನ್ನು ರಕ್ಷಿಸಲು ಹೋಗಿ ರೈಲಿಗೆ ರೈತ ಬಲಿ!

Public TV
1 Min Read

ಮಂಡ್ಯ: ಎಮ್ಮೆಗಳನ್ನು ರಕ್ಷಿಸಲು ಹೋಗಿ ರೈಲು ಡಿಕ್ಕಿ ಹೊಡೆದ ಪರಿಣಾಮ ರೈತರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಅಳೀಸಂದ್ರ ಗ್ರಾಮದ ಬಳಿ ನಡೆದಿದೆ.

ರಂಗಪ್ಪ(70) ಎಂಬುವರೇ ಮೃತ ರೈತ. ರಂಗಪ್ಪ ಅವರು ಎಂದಿನಂತೆ ಬೆಳಗ್ಗೆಯೇ ಎಮ್ಮೆ ಮೇಯಿಸಲು ಹೋಗಿದ್ರು. ಸಂಜೆಯಾಗುತ್ತಿದ್ದಂತೆ ಎಮ್ಮೆ ಮೇಯಿಸಿಕೊಂಡು ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ರೈಲು ಬರುತ್ತಿರುವುದರ ಅರಿವಿರದ ಎಮ್ಮೆಗಳು ರೈಲ್ವೆ ಹಳಿ ಮೇಲೆ ಹೋಗಿವೆ.

ರೈಲು ಬರುತ್ತಿರುವಾಗಲೇ ಹಳಿ ಮೇಲೆ ಬದುಕಿಗೆ ಜೀವನಾಧಾರವಾಗಿದ್ದ ಎಮ್ಮೆಗಳು ಇರುವುದನ್ನು ಗಮನಿಸಿದ ರೈತ ರಂಗಪ್ಪ ಅವುಗಳನ್ನು ಓಡಿಸಲು ಹಳಿ ಹತ್ತಿದ್ದಾರೆ. ಆದರೆ ಈ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದ್ದರಿಂದ ರೈತ ರಂಗಪ್ಪ ಮತ್ತು ಎರಡು ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

ರೈತ ರಂಗಪ್ಪನ ಸಾವಿನಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *