ಸುಧಾಕರ್, ರಕ್ಷಾರಾಮಯ್ಯ ಚಿಕ್ಕಬಳ್ಳಾಪುರದ ಎಂಪಿ ಆಗಲಿ- ಅಭಿಮಾನಿಗಳಿಂದ ಹರಕೆ

Public TV
1 Min Read

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ.ಸುಧಾಕರ್ (K. Sudhakar) ಚಿಕ್ಕಬಳ್ಳಾಪುರ (Chikkaballapur) ಕ್ಷೇತ್ರದ ಸಂಸದರಾಗಲಿ ಎಂದು ಭೋಗನಂದೀಶ್ವರ ರಥೋತ್ಸವದಲ್ಲಿ ಅಭಿಮಾನಿಯೊಬ್ಬರು ಹರಕೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ರಕ್ಷಾರಾಮಯ್ಯ (Raksha Ramaiah) ಕ್ಷೇತ್ರದ ಎಂಪಿಯಾಗಲಿ ಎಂದು ಅವರ ಅಭಿಮಾನಿ ಸಹ ಹರಕೆ ಮಾಡಿಕೊಂಡಿದ್ದಾರೆ.

&

nbsp;

ರಥೋತ್ಸವದಲ್ಲಿ ತೇರಿಗೆ ಸಮರ್ಪಿಸುವ ಬಾಳೆಹಣ್ಣಿನ ಮೇಲೆ ಡಾ.ಕೆ.ಸುಧಾಕರ್ ಎಂಪಿಯಾಗಲಿ ಎಂದು ಬರೆದು ರಥಕ್ಕೆ ಅರ್ಪಣೆ ಮಾಡಲಾಗಿದೆ. ಸುಧಾಕರ್ ಈ ಬಾರಿ ಬಿಜೆಪಿಯಿಂದ (BJP) ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನೂ ತೇರಿಗೆ ಬಾಳೆಹಣ್ಣು ಸಮರ್ಪಣೆಯಲ್ಲಿ ಸುಧಾಕರ್ ಹಾಗೂ ರಕ್ಷಾರಾಮಯ್ಯ ಅಭಿಮಾನಿಗಳ ನಡುವೆ ಪೈಪೋಟಿ ನಡೆದಿದೆ.

ಇತ್ತ ರಕ್ಷಾರಾಮಯ್ಯ ಅಭಿಮಾನಿಯಿಂದಲೂ ಹರಕೆ ಮಾಡಲಾಗಿದ್ದು, ಬಾಳೆಹಣ್ಣಿನ ಮೇಲೆ ರಕ್ಷಾರಾಮಯ್ಯ ಚಿಕ್ಕಬಳ್ಳಾಪುರ ಎಂಪಿ ಆಗಲಿ ಎಂದು ಬರೆದು ಸಮರ್ಪಣೆ ಮಾಡಿದ್ದಾರೆ. ರಕ್ಷಾರಾಮಯ್ಯ ಕಾಂಗ್ರೆಸ್ (Congress) ಪಕ್ಷದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

Share This Article