ಸುಮಲತಾಗೆ ಹಾರ ಹಾಕಿ ಯಶ್, ದರ್ಶನ್‍ಗೆ ಮುತ್ತಿಟ್ಟ ಅಭಿಮಾನಿ

Public TV
1 Min Read

ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಸುಮಲತಾ ಅಂಬರೀಶ್ ಅಂಬರೀಶ್ ಇಂದು ನಗರದಲ್ಲಿ ಭಾರೀ ರೋಡ್ ಶೋ ನಡೆಸಿದರು. ಈ ವೇಳೆ ಸುಮಲತಾ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮೆರವಣಿಗೆ ಉದ್ದಕ್ಕೂ ಎಡ-ಬಲದಲ್ಲಿ ನಿಂತು ಸಾಥ್ ನೀಡಿದ್ದಾರೆ.

ರೋಡ್ ಶೋ ಸಮಯದಲ್ಲಿ ಅಭಿಮಾನಿಯೊಬ್ಬರು ದೊಡ್ಡ ಹೂಹಾರ ತಂದು ಸುಮಲತಾ ಅವರ ಕೊರಳಿಗೆ ಹಾಕಿ ಅಭಿಮಾನ ಮೆರೆದರು. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಯಶ್ ಹಾಗೂ ದರ್ಶನ್ ಅವರಿಗೆ ಕೈ ಕೊಟ್ಟು, ಮುತ್ತಿಟ್ಟು ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೆ ನೆಚ್ಚಿನ ನಾಯಕರನ್ನು ಹತ್ತಿರದಿಂದ ನೋಡಿದ ಖುಷಿಗೆ ಕೈ ಎತ್ತಿ ಕುಣಿದು ಫುಲ್ ಖುಷಿ ಪಟ್ಟಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದ ಜ್ಯುಬಿಲಿ ಪಾರ್ಕ್ ವರೆಗೆ ನಡೆದ ರೋಡ್ ಶೋದಲ್ಲಿ ಭಾರೀ ಸಂಖ್ಯೆಯಲ್ಲಿ ಅಂಬಿ ಅಭಿಮಾನಿಗಳು ಪಾಲ್ಗೊಂಡು ಸುಮಲತಾ ಅವರಿಗೆ ಬೆಂಬಲ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *