ಇಡೀ ಕುಟುಂಬದ ಆತ್ಮಹತ್ಯೆಗೆ ಕಾರಣವಾಯ್ತು ಮಗನಿಗೆ ಬೈದ ಆ ಒಂದು ಬೈಗುಳ!

Public TV
1 Min Read

ಚಿಕ್ಕಬಳ್ಳಾಪುರ: ರೈಲಿಗೆ ಸಿಲುಕಿ ಹೆಂಡತಿ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮನನೊಂದಿದ್ದ ಗಂಡನು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

ಸುಬ್ರಮಣಿ(45) ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದ ಮನೆಯಲ್ಲಿ ಶುಕ್ರವಾರ ನೇಣಿಗೆ ಶರಣಾಗಿದ್ದಾನೆ.

ಸರಿಯಾಗಿ ಓದು ಅಂತ ಅಣ್ಣ ಮತ್ತು ತಾಯಿ ಕಿರಿಯ ಮಗನಾದ ಚಂದ್ರತೇಜನಿಗೆ ಬುದ್ಧಿವಾದ ಹೇಳಿದ್ದರು. ನನಗೆ ಹೀಗೆ ಹೇಳಿದರಲ್ಲ ಅಂತ ನೊಂದುಕೊಂಡು ಜೂನ್ 18ರಂದು ಕಿರಿಮಗ ಚಂದ್ರತೇಜ (12) ಆತ್ಮಹತ್ಯೆ ಮಾಡಿಕೊಂಡಿದ್ದ.

ನಾವು ಬೈದಿದ್ದಕ್ಕೆ ನೊಂದು ಚಂದ್ರತೇಜ ಆತ್ಮಹತ್ಯೆಗೆ ಶರಣಾಗಿದ್ದನ್ನು ಮನನೊಂದು ತಾಯಿ ಸುಜಾತ(37) ಹಿರಿಯಮಗ ಸೂರ್ಯತೇಜ (18) ಅವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗನ ಸಾವಿನ ನೋವಿನ ಜೊತೆ ಈಗ ಹೆಂಡತಿ ಮತ್ತು ಮಗ ಆತ್ಮಹತ್ಯೆಗೆ ಶರಣಾಗಿದ್ದನ್ನು ಕಂಡು ಸುಬ್ರಮಣಿ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಿರಿಮಗ ಚಂದ್ರತೇಜನ ದುಡುಕಿನ ನಿರ್ಧಾರದಿಂದ ಇಡೀ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *