ಮದ್ಯವ್ಯಸನಿ ಖಾವಿಧಾರಿಗೆ ಬಿತ್ತು ಗೂಸಾ- ಪಂಚೆಬಿಟ್ಟು ಎದ್ನೋ ಬಿದ್ನೋ ಅಂತಾ ಓಡಿದ ಕಳ್ಳ ಸ್ವಾಮಿ

Public TV
1 Min Read

ಧಾರವಾಡ: ಕುಡಿದ ಮತ್ತಿನಲ್ಲಿದ್ದ ಖಾವಿಧಾರಿಯೊಬ್ಬನಿಗೆ ಸಾರ್ವಜನಿಕರು ಚೆನ್ನಾಗಿ ಗೂಸಾ ಕೊಟ್ಟು ಓಡಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ಹೊರವಲಯದ ಹೋಯ್ಸಳ ನಗರದಲ್ಲಿ ಈ ಘಟನೆ ನಡೆದಿದ್ದು, ಖಾವಿಧಾರಿಯೊಬ್ಬ ಕುಡಿದ ಮತ್ತಿನಲ್ಲಿ ಜನರ ಮೇಲೆ ಕಾರು ಚಲಾಯಿಸಲು ಯತ್ನಿಸಿದ್ದಾನೆ. ಈ ವೇಳೆ ಜನರು ಆತನನ್ನು ಹಿಡಿದಾಗ ಆತ ಕುಡಿದ ಮತ್ತಿನಲ್ಲಿದ್ದಾನೆ ಎಂದು ತಿಳಿದು ಬಂದಿದೆ.

ಈ ಖಾವಿಧಾರಿಗೆ ಹೊಡೆಯುವ ವೇಳೆ ಪಂಚೆ ಕೂಡಾ ಬಿಚ್ಚಿದೆ. ಬಳಿಕ ಪಂಚೆಯನ್ನ ಕೂಡಾ ಬಿಟ್ಟು ಖಾವಿಧಾರಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇಂಡಿಕಾ ಕಾರಿನಲ್ಲಿ ಬಂದಿದ್ದ ಈ ಖಾವಿಧಾರಿ ಉತ್ತರಕನ್ನಡ ಜಿಲ್ಲೆಯ ದಾಂಡೆಲಿಯಿಂದ ವಿನಯಪುರಕ್ಕೆ ಹೊರಟಿದ್ದ ಎಂದು ತಿಳಿದು ಬಂದಿದೆ.

ಈ ಘಟನೆ ನಡೆದು ನಾಲ್ಕು ದಿನಗಳು ಕಳೆದಿವೆ. ಈ ವಿಡಿಯೋಗಳು ಮೊಬೈಲ್‍ನಲ್ಲಿ ವೈರಲ್ ಆಗಿದ್ದು, ಇದೀಗ ಖಾವಿಧಾರಿ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಈ ಖಾವಿಧಾರಿಯ ಕಾರಿನಲ್ಲಿ ಬಿಯರ್ ಹಾಗೂ ಸಿಗರೇಟ್ ಇದ್ದವು ಎಂದು ಜನರು ಮಾತನಾಡುತ್ತಿರುವುದು ವಿಡಿಯೊದಲ್ಲಿ ಕೇಳಿಸಿದೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

https://www.youtube.com/watch?v=cwFX5NvYWLA&feature=youtu.be

Share This Article
Leave a Comment

Leave a Reply

Your email address will not be published. Required fields are marked *