ಬಾಯಲ್ಲಿ ಚೊಂಬು ಇಟ್ಟು, ಪೇಪರ್‍ನಲ್ಲಿ ಬೆನ್ನು ಉಜ್ಜಿ ಹೊಟ್ಟೆಯಿಂದ ಏನಾದ್ರೂ ಬಿದ್ರೆ ಕಂಟಕ ಬಿಡ್ತು ಅಂತಾನೆ ಈ ಡೋಂಗಿ ಬಾಬಾ!

Public TV
1 Min Read

ವಿಜಯಪುರ: ಜಿಲ್ಲೆಯಲ್ಲೊಬ್ಬ ಮಾಟ ಮಂತ್ರ ಹೋಗಲಾಡಿಸುವ ಡೋಂಗಿ ಬಾಬಾನಿರುವ ಬಗ್ಗೆ ಬೆಳಕಿಗೆ ಬಂದಿದೆ. ಈತ ತಂಬಿಗೆ ಬಾಬಾ ಅಂತಾನೇ ಫೇಮಸ್ಸ್ ಆಗಿದ್ದಾನೆ.

ಹೌದು. ವಿಜಯಪುರದ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ವಂದಾಲ ಗ್ರಾಮದ ಈ ಡೋಂಗಿ ಸ್ವಾಮಿಯ ಹೆಸರು ಧರ್ಮಣ್ಣ. ಇವನು ಬಾಯಲ್ಲಿ ಖಾಲಿ ತಂಬಿಗೆ ಇಟ್ಟು, ಬೆನ್ನಿನ ಮೇಲೆ ಪೇಪರ್‍ನಿಂದ ಸವರುತ್ತಾನೆ. ಆಗ ಮಾಟ ಮಂತ್ರಕ್ಕೆ ಒಳಗಾದ್ರೆ ಅವರ ಬಾಯಿಂದ ಕಸವೋ, ಕಡ್ಡಿಯೋ ಅಥವಾ ಕಾಳೋ ಇಲ್ಲವೇ ಹಿಟ್ಟಿನ ಉಂಡೆಯೋ ಬೀಳುತ್ತಂತೆ. ಹೀಗೆ ಬಾಯಿಂದ ಬಿದ್ದ ವಸ್ತು ರೂಪದಲ್ಲಿ ಮಾಟ ಮಂತ್ರ ಮಾಯವಾಗುತ್ತಂತೆ.

ವಿಚಿತ್ರ ಅಂದ್ರೆ ತಲೆ ಹಾಗೂ ಬೆನ್ನಿನ ಮೇಲೆ ಕೂಡಾ ಪೇಪರ್ ಇಟ್ಟು ಪೆನ್ನಿನಿಂದ ಗೀಚುತ್ತಾನೆ. ತದನಂತರ ಬೇರೆ ಪೇಪರ್ ಕೊಟ್ಟು ಅದನ್ನು ಸೊಂಟದ ಮಧ್ಯೆ ಭಾಗ ಅಂದ್ರೆ ಕಿಬ್ಬೊಟ್ಟೆಯಲ್ಲಿ ಇಟ್ಟುಕೊಳ್ಬೇಕು ಅಂತ ಹೇಳುತ್ತಾನೆ. ಹೀಗೆ ಮಾಡುತ್ತಾ ಕಿಲಾಡಿ ಬಾಬಾ ಧರ್ಮಣ್ಣ ಇಬ್ಬರಿಂದ 200- 300 ರೂಪಾಯಿ ತೆಗೆದುಕೊಳ್ಳುತ್ತಾನೆ. ಅಲ್ಲದೇ ಈತನ ಪತ್ನಿಯ ಕೈಯಿಂದ ತಾಯ್ತ ಕೊಡಿಸಿ 50 ರೂಪಾಯಿ ವಸೂಲಿ ಮಾಡುತ್ತಿದ್ದಾನೆ ಅಂತ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *