250ಲೀ. ಮದ್ಯ ನೆಲಕ್ಕೆ ಚೆಲ್ಲಿ ಅಧಿಕಾರಿಗಳಿಂದ ಬೆಂಕಿ

Public TV
1 Min Read

ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ಪಟ್ಟಣದ ಹೊರವಲಯದ ತೇಗನಹಳ್ಳಿ ಬಳಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ನೆಲಕ್ಕೆ ಚೆಲ್ಲಿ, ಬೆಂಕಿ ಹಾಕಿ ನಾಶ ಮಾಡಿದ್ದಾರೆ.

ಅಬಕಾರಿ ಇಲಾಖೆಯ ಅಧಿಕಾರಿಗಳು ಸುಮಾರು 250 ಲೀಟರ್ ಮದ್ಯವನ್ನು ವಿವಿಧ ಅಂಗಡಿ, ಡಾಬಾಗಳಲ್ಲಿ ವಶಪಡಿಸಿಕೊಂಡಿದ್ದರು. ಪಾಂಡವಪುರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಕೆ.ವಿ ದಿನಕರ್ ಅವರ ನೇತೃತ್ವದಲ್ಲಿ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮದ್ಯವನ್ನು ನಾಶಪಡಿಸಿದ್ದಾರೆ.

ಕೆಆರ್ ಪೇಟೆ ಪಟ್ಟಣದ ಹೊರವಲಯದ ತೇಗನಹಳ್ಳಿ ಬಳಿ ತೆಗೆದುಕೊಂಡು ಹೋಗಿ ಅಲ್ಲಿ ಅವುಗಳನ್ನು ನೆಲಕ್ಕೆ ಚೆಲ್ಲಿ, ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಮದ್ಯ ಪ್ರಿಯರಂತು ನೂರಾರು ಲೀಟರ್ ಎಣ್ಣೆಯನ್ನು ಅಧಿಕಾರಿಗಳು ನೆಲಕ್ಕೆ ಚೆಲ್ಲುತ್ತಿದ್ದರೆ ಏನು ಮಾಡದ ಸ್ಥಿತಿಯಲ್ಲಿ ಸುಮ್ಮನೆ ನೋಡುತ್ತಾ ನಿಂತಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *