ಹನುಮ ಜಯಂತಿಗೆ ಶೂ ಧರಿಸಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಪಾದಯಾತ್ರೆ

Public TV
1 Min Read

ಬಳ್ಳಾರಿ: ಹನುಮ ಜಯಂತಿ ಆಚರಣೆಗೆ ಅವಕಾಶ ನೀಡಲಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪೊಲೀಸರ ವಿರುದ್ಧ ಸಿಟ್ಟಾಗಿದ್ದರೆ, ಜಿಲ್ಲೆಯ ಮಾಜಿ ಶಾಸಕರೊಬ್ಬರು ಶೂ ಧರಿಸಿ ಹನುಮ ಜಯಂತಿಯ ಪಾದಯಾತ್ರೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

ಮಾಜಿ ಶಾಸಕ ಸೋಮಶೇಖರ ರೆಡ್ಡಿ ಹನುಮ ಜಯಂತಿಯಂದು ಮಾಲೆ ಧರಿಸಿ ಶೂ ಹಾಕಿಕೊಂಡು ಪಾದಯಾತ್ರೆ ಮಾಡಿದ್ದಾರೆ. ಹನುಮಂತನ ಭಕ್ತರಾದ ಮಾಜಿ ಶಾಸಕ ರೆಡ್ಡಿ ಪ್ರತಿ ವರ್ಷ ತಪ್ಪದೇ ಮಾಲೆ ಧರಿಸಿ ಹನುಮ ಜಯಂತಿ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಬಾರಿ ಬಳ್ಳಾರಿಯಿಂದ ಆಂಧ್ರದ ಗಡಿ ಭಾಗದಲ್ಲಿರುವ ಕಸಾಪುರ ಆಂಜನೇಯನ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ವೇಳೆ ಶೂ ಧರಿಸಿ ಯಾತ್ರೆ ಆರಂಭಿಸಿದ್ದಾರೆ.

ಶೂ ಧರಿಸಿ ಪಾದಯಾತ್ರೆ ಮಾಡಿದರೆ ಹನುಮ ಜಯಂತಿಗೆ ಅಗೌರವ ಮಾಡಿದಂತೆ. ಇದರಿಂದ ಪ್ರಯೋಜನ ಏನು ಬಂತು ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ.

ಈ ಕುರಿತು ರೆಡ್ಡಿ ಆಪ್ತರನ್ನು ಪ್ರಶ್ನೆ ಮಾಡಿದ್ರೆ, ಸಾಹೇಬರು 65 ಕಿಲೋ ಮೀಟರ್ ದೂರ ಪಾದಯಾತ್ರೆ ಮಾಡಬೇಕಾದ ಹಿನ್ನೆಲೆಯಲ್ಲಿ ನಾವೇ ಒತ್ತಾಯ ಮಾಡಿ ಶೂ ಹಾಕಿಕೊಳ್ಳುವಂತೆ ಸೂಚಿಸಿದೆವು. ಹೀಗಾಗಿ ಶೂ ಹಾಕಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *