ರಾಮನಗರ: ನಿಮ್ಮ ಮುಖಕ್ಕೆ ನಾಚಿಕೆಯಾಗಬೇಕು. ನಿಮ್ಮ ಜೀವನಕ್ಕೆ ಒಂದಿಷ್ಟು ಬೆಂಕಿ ಬೀಳಾ. ಗಂಡಸರಾಗಿ ಇಲ್ಲ ಹೆಂಗಸರಾಗಿ ಮಧ್ಯದಲ್ಲಿರುವವರು ಆಗಬೇಡಿ. ಧೈರ್ಯವಿದ್ರೆ ಎದುರಿಗೆ ಬಂದು ಗಂಡಸ್ತನವಿದೆ ಅಂತ ಹೇಳಿ. ಧೈರ್ಯವಿದ್ಯಾ ನಿಮಗೆ ಎಂದು ಮಂಗಳೂರು ಬಾಂಬ್ ಪ್ರಕರಣದ ವಿಚಾರವಾಗಿ ಬಿಜೆಪಿ ನಾಯಕರು ಹಾಗೂ ಆರ್ಎಸ್ಎಸ್ ನಾಯಕರ ವಿರುದ್ಧ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಕಿಡಿಕಾರಿದ್ದಾರೆ.
ಚನ್ನಪಟ್ಟಣದಲ್ಲಿ ನಡೆದ ಸಿಎಎ, ಎನ್ಆರ್ಸಿ ವಿರೋಧಿ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ರು. ಇದೇ ವೇಳೆ ಮಾತನಾಡಿದ ಅವರು, ಮೋದಿ, ಅಮಿತ್ ಶಾರವರ ಕಳ್ಳತನದ ನ್ಯಾಕ್ ಹೇಗಿದೆ ಅಂದ್ರೆ ಚೋರ್, ಚೋರ್ ಅಂತ ಪಕ್ಕದವರ ಜೇಬು ಕಳ್ಳತನ ಮಾಡ್ತಾರೆ. ದೆಹಲಿ ಎಲೆಕ್ಷನ್ನಲ್ಲಿ ಕೇಜ್ರಿವಾಲ್ ಗೆಲ್ತಿದ್ದಂತೆ ಅಮಿತ್ ಶಾ ಬಾಯಿ ಬಂದ್ ಆಗಿದ್ದು, ಸೋಲಿಗೆ ಮೋದಿ, ಅಮಿತ್ ಶಾನ ಬಿಟ್ಟು ನಡ್ಡಾನ ಅಡ್ಡ ಮಾಡ್ಬಿಟ್ರು ಎಂದು ತಿಳಿಸಿದ್ರು.
ಮಂಗಳೂರು ಬಾಂಬ್ ಪ್ರಕರಣದಲ್ಲಿ ಏರ್ಪೋರ್ಟಿನಲ್ಲಿ ಬಾಂಬ್ ಇಟ್ಟ ಆದಿತ್ಯರಾವ್ ಲವ್ ಮಾಡೋಕೆ ಬಾಂಬ್ ಇಟ್ನಾ, ಆತನನ್ನ ಹುಚ್ಚ ಅಂತ ಗೃಹ ಸಚಿವ ಬೊಮ್ಮಾಯಿ ಕರೆದ್ರೆ, ಪ್ರಭಾಕರ್ ಭಟ್ ನನ್ನ ಜೊತೆ ಎಲ್ಲರೂ ಪೋಟೋ ತೆಗೆಸ್ಕೋತಾರೆ ಅಂತೇಳಿ ಜಾರಿಕೊಂಡ್ರು. ಇದನ್ನೇ ಸಾಬ್ರು ಮಾಡಿದ್ರೆ ಇಷ್ಟರಲ್ಲಿ ಏನೇನೋ ಆಗ್ಬಿಡ್ತಿತ್ತು. ರಾಜ್ಯದಲ್ಲಿ ಕಾನೂನೂ ಎಲ್ಲರಿಗೂ ಒಂದೇ ಸಾಬ್ರು ಅಂತ ಏನ್ ಬಿಟ್ಬಿಡ್ತೀರಾ ಎಂದು ಪ್ರಶ್ನಿಸಿದ್ರು.
ಮೋದಿಯವರು ಹೇಳ್ತಾರೆ ಮುಸ್ಲಿಮರು ನಾಲ್ಕು ಮದುವೆ ಆಗ್ತಾರೆ ಅಂತಾರೆ ಅಂತ. ನಮ್ಮ ಧರ್ಮದಲ್ಲಿ ನಾಲ್ಕು ಮದುವೆಗೆ ಅವಕಾಶವಿದೆ, ಆದರೆ ಐದನೆಯದ್ದಕ್ಕೆ ಕಣ್ಣು ಹಾಕಿದ್ರೆ ತಲೆ ಕತ್ತರಿಸುತ್ತಾರೆ. ಈ ಕಾನೂನು ತರಲಿಕ್ಕೆ ಮೋದಿ ಕೈಲಿ ಸಾಧ್ಯನಾ. ಆಫೀಸಿಯಲಿ ನನಗೆ ಒಂದೇ ಮದುವೆಯಾಗಿರೋದು, ಅನ್ ಅಫೀಷಿಯಲಿ ನಿಮಗೆ ಎಷ್ಟಿದ್ಯೋ ಗೊತ್ತಿಲ್ಲ ಎಂದರು.
ಗೋ ಮದುಸೂಧನ, ಅವರವ್ವನೇ ಗೋ ಅಂತ ಹೆಸರಿಟ್ಬಿಟ್ಟಿದ್ದಾಳೆ. ಉತ್ತರ ಪ್ರದೇಶದ ಸಿಎಂ ಯೋಗಿ, ಜೋಗಿ ಊರಿನ ಹೆಸರು ಬದಲಾಯಿಸಲು ಹೊರಟಿದ್ದಾನೆ. ಆದರೆ ಹೆಸರು ಬದಲಿಸಿದ್ರೆ ಏನೂ ಆಗೋದಿಲ್ಲ. ಮೊದಲು ನಿಮ್ಮ ಮನಸ್ಸು ಬದಲಾಯಿಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.