ನಮ್ಮ ತಂಟೆಗೆ ಬಂದ್ರೆ ನಿನ್ ಕಥೆ ಅಷ್ಟೆ – ಸುರೇಶ್‍ಗೌಡಗೆ ಚನ್ನಿಗಪ್ಪ ಅವಾಜ್

Public TV
1 Min Read

ತುಮಕೂರು: ಮಾಜಿ ಸಚಿವ ಚನ್ನಿಗಪ್ಪ ಅವರು ಪರಾಜಿತ ಅಭ್ಯರ್ಥಿ ಸುರೇಶ್ ಗೌಡಗೆ ಆವಾಜ್ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಎಲೆಕ್ಷನ್‍ನಲ್ಲಿ ಸೋತಿದ್ದಿಯಾ. ಮುಚ್ಕೊಂಡು ನಡಿಯಲೋ ಕಂಡಿದ್ದೀನಿ. ಏಯ್ ಹುಷಾರ್. ನಮ್ಮ ತಂಟೆಗೆ ಬಂದರೆ ಬಂದ್ರೆ ಅಷ್ಟೇ ನಿನ್ ಕಥೆ ಅಂತ ಧಮ್ಕಿ ಹಾಕಿದ್ದಾರೆ. ಇದೀಗ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

ಸುರೇಶ್ ಗೌಡರನ್ನ ಮೆಂಟಲ್ ಸುರೇಶ್ ಗೌಡ ಅಂತಾರೇ. ಸುರೇಶ್ ಗೌಡನಂತ ದಬ್ಬಾಳಿಕೆ ನಾನೂ ಮಾಡಿಲ್ಲ. ಯೂನಿವರ್ಸಿಟಿಯಲ್ಲಿ ನಕಲಿ ಅಂಕಪಟ್ಟಿ, ನಕಲಿ ಟಿಸಿ ಮಾರಾಟ ಮಾಡಿಸಿದವರು. ಸರ್ಕಾರಿ ಮೈದಾನಕ್ಕೆ ಬರ್ಲಿ. ನಾನು ಮಾತಾಡ್ತೆನೆ, ಅವನು ಮಾತಾಡಲಿ. ಅವನ ತಾಕತ್ ಪ್ರದರ್ಶನ ಮಾಡಲಿ ಅಂತ ಸುರೇಶ್‍ಗೌಡಗೆ ಚೆನ್ನಿಗಪ್ಪ ಓಪನ್ ಚಾಲೆಂಜ್ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *