– ಸಿದ್ದರಾಮಯ್ಯ ಸಂಪುಟದಿಂದ ಕಾಂಗ್ರೆಸ್ ಸೇರ್ಪಡೆಗೆ ಆಫರ್ ಬಂದಿತ್ತು; ಮಾಜಿ ಡಿಸಿಎಂ
– ಯಡಿಯೂರಪ್ಪ ಕುಟುಂಬದ ಬಗ್ಗೆ ಈಶ್ವರಪ್ಪ ಸಾಫ್ಟ್ ಕಾರ್ನರ್
ಬಳ್ಳಾರಿ: ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ, ಬಿಜೆಪಿಗೆ ಹೋಗೇ ಹೋಗ್ತೇನೆ ಎಂದು ಬಳ್ಳಾರಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದ್ರು.
ನಿನ್ನೆ ನಡೆದ ಕುರುಬ ಸಮುದಾಯದ ಬಿಜೆಪಿ ನಾಯಕರ (BJP Leaders) ಸಭೆಯಲ್ಲಿನ ಒತ್ತಾಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಜೀವ ಇರೋದೇ ಬಿಜೆಪಿಯಲ್ಲಿ. ನೊಡೋಣ, ಕೆಲವರು ಹಿರಿಯರಲ್ಲಿ ಮಾತಮಾಡಬೇಕು. ಕುಳಿತು ಚರ್ಚೆ ಮಾಡೋಣ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಕುರುಬ ಸಮುದಾಯದ ನಾಯಕರ ಸಭೆ; ವಿಜಯೇಂದ್ರ ಪರ ಬ್ಯಾಟಿಂಗ್ – ಈಶ್ವರಪ್ಪ ಘರ್ ವಾಪ್ಸಿ ಬಗ್ಗೆ ಚರ್ಚೆ
ಬೇರೆ ಪಕ್ಷದಿಂದ ಆಫರ್ ಬಂದಿತ್ತು. ಸಿದ್ದರಾಮಯ್ಯ (Siddaramaiah) ಸಚಿವ ಸಂಪುಟದ ಸಚಿವರು ಕರೆದಿದ್ರು. ನಿಮಗೆ, ನಿಮ್ಮ ಮಗನಿಗೆ ಸ್ಥಾನ ಮಾನ ಕೊಡ್ತೇವೆ ಎಂದ್ರು. ಅಖಿಲೇಶ್ ಯಾದವ್ ಕೂಡ ಕರೆದಿದ್ರು. ನಾನು ಹಿಂದುತ್ವ, ಸತ್ರೂ ಹಿಂದುತ್ವ. ಬಿಜೆಪಿ ಇವತ್ತು ನಿನ್ನೆಯ ಪಕ್ಷ ಅಲ್ಲ. ಯಡಿಯೂರಪ್ಪ (BS Yediyurappa), ಅನಂತ್ ಕುಮಾರ್ ನಾನು ಸೇರಿ ಹಲವು ಹಿರಿಯರು ರಾಜ್ಯದಲ್ಲಿ ಪಕ್ಷ ಕಟ್ಟಿದ್ವಿ. ಅದಕ್ಕೂ ಮುಂಚೆ ಹಲವರು ರಕ್ತ ಸುರಿಸಿ ಪಕ್ಷ ಕಟ್ಟಿದ್ದಾರೆ. ಗ್ರಾಮ ಪಂಚಾಯ್ತಿ, ಕಾರ್ಪೋರೇಷನ್ ಎಲೆಕ್ಷನ್ ಮಾಡೋದಕ್ಕೂ ಜನ ಇರಲಿಲ್ಲ. ಅಂತ ಸಂದರ್ಭದಲ್ಲಿ ಪಕ್ಷ ಕಟ್ಟಿದ್ದೇವೆ ಎಂದು ಬಿಜೆಪಿ ಗುಣಗಾನ ಮಾಡಿದರು.
ಪಕ್ಷಕ್ಕೆ ನನ್ನನ್ನು ಯಾರೋ ಕರೀಬೇಕು, ಕರೀಬಾರದು ಅಂತಾ ಅಲ್ಲ ಹಿರಿಯರು ಚರ್ಚೆ ಮಾಡ್ತಾರೆ. ನನ್ನ ಪಕ್ಷಕ್ಕೆ ಕರೆದುಕೊಳ್ಳುವಲ್ಲಿ ಬಿಜೆಪಿ ಯಾಕೆ ಎಚ್ಚೆತ್ತುಕೊಂಡಿಲ್ಲ ಅಂತಾ ನಾನು ಹೇಳಲ್ಲ ಎಂದ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದು ಮುಗಿತು. ಅದರ ಬಗ್ಗೆ ನಾನು ಇನ್ನು ಮೇಲೆ ಮಾತಾಡೋದಿಲ್ಲ ಎಂದರು. ಇದನ್ನೂ ಓದಿ: ರೈಲ್ವೆ ಯೋಜನೆಗಳಿಗೆ ಹಣ ಕೊಡದ ರಾಜ್ಯ ಸರ್ಕಾರ – ಬಿಜೆಪಿ ನಾಯಕರಿಂದ ತೀವ್ರ ಟೀಕೆ
ಈಗ ಕರ್ನಾಟಕದಲ್ಲಿ ಪಾರ್ಟಿ ಸ್ವಲ್ಪ ಕುಸಿದಿದ್ದು, ಪಕ್ಷ ಕಟ್ಟಬೇಕಿದೆ ಎಂದು ಯಡಿಯೂರಪ್ಪ ಕುಟುಂಬದ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಿದ್ರು. ಇದನ್ನೂ ಓದಿ: ಪುರಿ ಕಾಲ್ತುಳಿತದಲ್ಲಿ ಮೂವರ ಸಾವು ಪ್ರಕರಣ – ಸಂತ್ರಸ್ತರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ