ಧರಂ ಸಿಂಗ್ ಜೇವರ್ಗಿ ಕ್ಷೇತ್ರದ ಮತ ಪ್ರಭುಗಳಿಗೆ ಕೊನೇ ಬಾರಿ ನಮನ ಸಲ್ಲಿಸಿದ್ದು ಹೀಗೆ

Public TV
1 Min Read

ಕಲಬುರಗಿ: 2014ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಜೇವರ್ಗಿ ಕ್ಷೇತ್ರದಿಂದ 37 ಸಾವಿರ ಮತಗಳಿಂದ ಜಯಗಳಿಸಿದ್ದರು. ಪುತ್ರನ ಗೆಲುವಿನ ಬಳಿಕ ಮಾತನಾಡಿದ್ದ ಧರಂ ಸಿಂಗ್ ಇದು ನನ್ನ ಕೊನೆಯ ಭಾಷಣ ಎಂದು ಕಣ್ಣೀರು ಹಾಕಿದ್ದರು.

2014ರ ಚುನಾವಣೆಯಲ್ಲಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ 37 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ನಂತರ ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಧರಂಸಿಂಗ್ ಇದು ನನ್ನ ಕೊನೆಯ ಭಾಷಣ, ಇನ್ನು ಮುಂದೆ ಕ್ಷೇತ್ರದ ಜನ ನನ್ನ ಪುತ್ರ ಅಜಯ್ ಸಿಂಗ್ ಅವರಿಗೆ ಆರ್ಶಿರ್ವಾದ ಮಾಡಬೇಕು ಅಂತಾ ಕಣ್ಣೀರು ಹಾಕಿದ್ದರು.

ಧರಂಸಿಂಗ್ ಅವರ ಮಾತು ಕೇಳಿದ ಅವರ ಪುತ್ರ ಅಜಯ್ ಸಿಂಗ್ ಹಾಗು ಕ್ಷೇತ್ರದ ಜನರಲ್ಲಿ ಸಹ ಕಣ್ಣಿರು ತುಂಬಿ ಬಂದಿತ್ತು. ಧರಂಸಿಂಗ್ ನಂತರ ಅವರ ಪುತ್ರ ಅಜಯ್ ಸಿಂಗ್ ತಂದೆಯ ಮಾತಿಗೇ ಕಣ್ಣಿರಿನಲ್ಲಿಯೇ ಉತ್ತರ ಕೊಟ್ಟಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *