ಚುನಾವಣೆ ಘೋಷಣೆ ಮುನ್ನವೇ ದೇವರ ಮೊರೆ ಹೋದ ಅಭ್ಯರ್ಥಿ- ಗೆಲುವಿಗಾಗಿ ಗಿರಿಜಾ ಕಲ್ಯಾಣ

Public TV
1 Min Read

ತುಮಕೂರು: ಜಿಲ್ಲೆಯ ತಿಪಟೂರು ಕ್ಷೇತ್ರದ ಅಭ್ಯರ್ಥಿಯೊಬ್ಬರು ಚುನಾವಣೆ ಘೋಷಣೆ ಮುನ್ನವೇ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.

ತಿಪಟೂರು ಕ್ಷೇತ್ರದಿಂದ ಸ್ವರ್ಧಿಸಲು ಅಣಿಯಾದ ಕೆ.ಟಿ. ಶಾಂತಕುಮಾರ್ ಇಂದು ಗಿರಿಜಾ ಕಲ್ಯಾಣ ನಡೆಸುವ ಮೂಲಕ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ. ಆನಂದ ಗುರುಜೀ ನೇತೃತ್ವದಲ್ಲಿ ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ “ಗಿರಿಜಾ ಕಲ್ಯಾಣ” ಮಹೋತ್ಸವ ನಡೆಸುವ ಮೂಲಕ ಗೆಲುವಿಗಾಗಿ ಕಸರತ್ತು ನಡೆಸಿದ್ದಾರೆ.

ಕೆ.ಟಿ.ಶಾಂತಕುಮಾರ್ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದೆ. ಆದ್ರೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಹೀಗಾಗಿ ಚುನಾವಣೆ ಘೋಷಣೆಗೆ ಮೊದಲೇ ದೇವರ ಮೊರೆ ಹೋಗಿದ್ದಾರೆ. ಈ ಗಿರಿಜಾ ಕಲ್ಯಾಣ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು

Share This Article
Leave a Comment

Leave a Reply

Your email address will not be published. Required fields are marked *