ಈಶ್ವರಪ್ಪನಿಗೆ ಮೆದುಳಿಲ್ಲ, ಅವನಿಗೂ ಮನಸ್ಸಲ್ಲಿರೋದು ಬಿಜೆಪಿ ಸೋಲಲಿ ಅಂತ- ಏಕವಚನದಲ್ಲಿ ಸಿಎಂ ಲೇವಡಿ

By
1 Min Read

ಚಾಮರಾಜನಗರ: ಈಶ್ವರಪ್ಪನಿಗೆ ಮೆದುಳಿಲ್ಲ. ಅವನಿಗೂ ಮನಸ್ಸಿನಲ್ಲಿರುವುದು ಬಿಜೆಪಿ ಸೋಲಲಿ ಅಂತ ಎಂದು ಪರಿಷತ್ ಪ್ರತಿಪಕ್ಷ ನಾಯಕ, ಬಿಜೆಪಿ ಮುಖಂಡ ಈಶ್ವರಪ್ಪ ವಿರುದ್ಧ ಏಕವಚನ ಪ್ರಯೋಗಿಸಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಗುಂಡ್ಲುಪೇಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಚಿಕ್ಕಟ್ಟಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಸಿಎಂ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಅವರು, ಈಶ್ವರಪ್ಪನಿಗೆ ಮೆದುಳಿಲ್ಲ. ಅವನಿಗೂ ಮನಸ್ಸಿನಲ್ಲಿರುವುದು ಬಿಜೆಪಿ ಸೋಲಲಿ ಅಂತ. ಯಾಕಂದ್ರೆ ಯಡಿಯೂರಪ್ಪಗೂ ಅವನಿಗೂ ಅಗಿ ಬರಲ್ಲ ಯಡಿಯೂರಪ್ಪ, ಈಶ್ವರಪ್ಪರಿಂದಲೇ ಸುಳ್ಳು ಹುಟ್ಟಿತು ಅಂದ್ರು.

ಗೀತಾ ಮಹದೇವ ಪ್ರಸಾದ್ ಅವರನ್ನ ಒತ್ತಾಯ ಮಾಡಿ ಚುನಾವಣೆಗೆ ನಿಲ್ಲಿಸಿದವರು ನಾವು. ಆ ದುಖಃದಲ್ಲೂ ಗೀತಾ ಮಹದೇವ ಪ್ರಸಾದ್ ಚುನಾವಣಾ ಪ್ರಚಾರ ಮಾಡ್ತಿದ್ದಾರೆ ಅಂದ್ರು.

Share This Article
Leave a Comment

Leave a Reply

Your email address will not be published. Required fields are marked *