ಕಬಿನಿ ಹಿನ್ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರ ಸಾವು!

Public TV
0 Min Read

ಮೈಸೂರು: ಕಬಿನಿ ಹಿನ್ನೀರಿನಲ್ಲಿ ಮುಳುಗಿ ಮೂವರ ಸಾವನ್ನಪ್ಪಿದ ಘಟನೆ ಕೇರಳದ ಗಡಿಭಾಗ ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಗೋಳೂರು ಮಸೀದಿಯ ಬಳಿ ನಡೆದಿದೆ.

ತಂದೆ ಚಾಲಕಲ್ ಬೇಬಿ(53), ಮಗ ಅಜಿತ್(24) ಹಾಗೂ ಮಗಳು ಅನಿತ(18) ಮೃತ ದುರ್ದೈವಿಗಳು. ಮೃತರು ಕೇರಳದ ಕಬಿನಿ ಗಿರಿ ನಿವಾಸಿಗಳು ಎಂದು ಹೇಳಲಾಗಿದ್ದು, ಮಗಳು ಅನಿತಾ ಸ್ನಾನ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.

ಮಗಳು ಅನಿತಾಳನ್ನು ರಕ್ಷಿಸಲು ಆಕೆಯ ತಂದೆ ನದಿಯ ಬಳಿ ಹೋದರು. ನಂತರ ಅವರು ಮುಳುಗುತ್ತಿದ್ದಾಗ ತಂದೆಗೆ ಸಹಾಯ ಮಾಡಲು ಹೋದ ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಕೇರಳದ ಪುಲ್ಪಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *