ಹೈಡ್ರೇಟ್ ಆಗಿರಲು ಸವಿಯಿರಿ ಕಲ್ಲಂಗಡಿ, ದಾಳಿಂಬೆಯ ಪಂಚ್

By
1 Min Read

ಲ್ಲಂಗಡಿ ಮತ್ತು ದಾಳಿಂಬೆಯ ಪಂಚ್ ಹಗುರ, ರಿಫ್ರೆಶಿಂಗ್ ಮತ್ತು ಸರಳವಾದ ಪಾನೀಯವಾಗಿದೆ. ಈ ಹಣ್ಣುಗಳ ಸೇವನೆ ದೇಹವನ್ನು ಹೈಡ್ರೇಟ್ ಆಗಿ ಇರಿಸಲು ಸಹಾಯ ಮಾಡುತ್ತದೆ. ನವರಾತ್ರಿಯ ಸಂದರ್ಭ ಹೆಚ್ಚಿನವರು ವೃತವನ್ನಾಚರಿಸುತ್ತಾರೆ. ಈ ವೇಳೆ ದೇಹದಲ್ಲಿ ನೀರಿನಂಶದ ಕೊರತೆಯಾಗಬಹುದು. ಇದನ್ನು ನೀಗಿಸಲು ನೀವು ಕಲ್ಲಂಗಡಿ, ದಾಳಿಂಬೆಯ ಪಂಚ್ ಖಂಡಿತಾ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:
ಹೆಚ್ಚಿದ ಕಲ್ಲಂಗಡಿ ಹಣ್ಣು – 4 ಕಪ್
ದಾಳಿಂಬೆ ಬೀಜಗಳು – 1 ಕಪ್
ಸಕ್ಕರೆ – ಕಾಲು ಕಪ್
ಪುದೀನಾ – 6-7 ಎಲೆಗಳು
ನಿಂಬೆ ರಸ- 2 ಟೀಸ್ಪೂನ್
ತಣ್ಣಗಿನ ನೀರು – 2 ಕಪ್
ಐಸ್ ಕ್ಯೂಬ್ – 2 ಕಪ್ ಇದನ್ನೂ ಓದಿ: ಇಮ್ಯೂನಿಟಿ ಪವರ್‌ಗಾಗಿ ಸವಿಯಿರಿ ಸೀತಾಫಲ ಸ್ಮೂದಿ

ಮಾಡುವ ವಿಧಾನ:
* ಮೊದಲಿಗೆ ಕಲ್ಲಂಗಡಿ, ದಾಳಿಂಬೆ, ಸಕ್ಕರೆ, ಪುದೀನ ಎಲೆ ಮತ್ತು ನಿಂಬೆ ರಸವನ್ನು ಬ್ಲೆಂಡರ್‌ಗೆ ಹಾಕಿ, 1-2 ನಿಮಿಷಗಳ ಕಾಲ ಅಥವಾ ನಯವಾಗುವ ತನಕ ಬ್ಲೆಂಡ್ ಮಾಡಿ.
* ನಂತರ ಅದಕ್ಕೆ ನೀರನ್ನು ಹಾಕಿ ಮತ್ತೆ ಸ್ವಲ್ಪ ಬ್ಲೆಂಡ್ ಮಾಡಿ.
* ಸ್ಟ್ರೈನರ್‌ಗೆ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಸೋಸಿಕೊಳ್ಳಿ.
* ಸರ್ವಿಂಗ್ ಗ್ಲಾಸ್‌ಗಳಿಗೆ ರಸವನ್ನು ಸುರಿಯಿರಿ. ಅದಕ್ಕೆ ಐಸ್ ಕ್ಯೂಬ್‌ಗಳನ್ನು ಸೇರಿಸಿ.
* ಇದೀಗ ಕಲ್ಲಂಗಡಿ, ದಾಳಿಂಬೆ ಪಂಚ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮಖಾನಾ ಖೀರ್ ಮಾಡಿ ನೋಡಿ

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್