ಕಾರವಾರ: ಒಂದು ದಿನ ಉಪವಾಸವಿದ್ದರೇ ಪ್ರಾಣ ಹೋದಂತಹ ಅನುಭವವಾಗುತ್ತದೆ. ಆದರೆ ಇಲ್ಲೊಬ್ಬರು ಅನ್ನ ಆಹಾರ ಸೇವಿಸದೇ ಬರೊಬ್ಬರಿ 18 ವರ್ಷಗಳಿಂದ ಗಾಳಿ ಬೆಳಕು ಸೇವಿಸಿ ಬದುಕಿದ್ದಾರೆ.
ಎಲಿಟಾಮ್(56) 15 ವರ್ಷದಿಂದ ಆಹಾರ ಸೇವಿಸದೆ ಬದುಕಿರುವ ವ್ಯಕ್ತಿ. ಇವರು ಅಮೆರಿಕಾ ಪ್ರಜೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ಅಶ್ವಿನಿಧಾಮದಲ್ಲಿ ಕಾಯಕಲ್ಪ ಚಿಕಿತ್ಸೆ ಪಡೆಯಲು ಬಂದಿದ್ದಾರೆ.
ಕುಟುಂಬ ನಿರ್ವಹಣೆಗಾಗಿ ತನ್ನ ಹಸಿವನ್ನು ನೀಗಿಸಿಕೊಳ್ಳಲು ಭಾರತೀಯ ಯೋಗ, ಧ್ಯಾನದ ಕಡೆ ವಾಲಿ ಹಂತಹಂತವಾಗಿ ಆಹಾರ ತ್ಯಜಿಸಿ ತಿಂಗಳಿಗೊಮ್ಮೆ ಎರಡು ಲೀಟರ್ ನೀರು ಕುಡಿದು, ಕೇವಲ ಗಾಳಿ, ಸೂರ್ಯನ ಬೆಳಕನ್ನ ತನ್ನ ಶರೀರಕ್ಕೆ ಹೊಂದಿಸಿಕೊಂಡಿದ್ದಾರೆ. ಈ ಮೂಲಕ ದೇಹಕ್ಕೆ ಆಹಾರ ಮುಖ್ಯವಲ್ಲ ಎನ್ನುವುದನ್ನು ಹೊರ ಜಗತ್ತಿಗೆ ತೋರಿಸಿದ್ದಾರೆ. ಇದು ನಿಜವಾಗಿಯೂ ಶ್ಲಾಘನೀಯ ಎಂದು ಅಶ್ವಿನಿಧಾಮದ ವೈದ್ಯ ಡಾ.ರವಿರಾಜ್ ಕಡ್ಲೆ ಹೇಳಿದ್ದಾರೆ.
ನಮ್ಮ ದೇಹವು ಮಿದುಳಿನ ಮಾತನ್ನು ಕೇಳುತ್ತದೆ. ಉಪವಾಸಕ್ಕೂ ಮೊದಲು ಮಿದುಳು ಅದಕ್ಕೆ ಸಿದ್ಧವಾಗುವಂತೆ ಮಾಡಬೇಕು. ಇದು ನನಗೆ ಪ್ರಾಣಾಯಾಮದಿಂದ ಸಾಧ್ಯವಾಗಿದೆ. 18 ವರ್ಷದ ಹಿಂದೆ ಅನಾರೋಗ್ಯ ಕಾಣಿಸಿಕೊಂಡಾಗ ಮಾಂಸಾಹಾರವನ್ನು ಬಿಟ್ಟೆ. ನಂತರ ಸಸ್ಯಹಾರ, ದ್ರವ ಆಹಾರವನ್ನು ತ್ಯಜಿಸಿದೆ. ಮಿದುಳಿನ ನಿಗ್ರಹದಿಂದ ಇದೆಲ್ಲ ಸಾಧ್ಯ. ಧ್ಯಾನದ ಮೂಲಕ ನಾನು ನನ್ನ ಮನಸ್ಸನ್ನು ನಿಯಂತ್ರಿಸಿಕೊಂಡಿದ್ದೇನೆ ಎಂದು ಎಲಿಟಾಮ್ ಅವರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews