ವಿಡಿಯೋ: ಹರಿಯುವ ಕಾವೇರಿ ನದಿಯಲ್ಲಿ ಸಿಲುಕಿ ಪರದಾಡಿದ ಒಂಟಿ ಸಲಗ

Public TV
1 Min Read

ಚಾಮರಾಜನಗರ: ಆಹಾರ ಅರಸಿ ನಾಡಿನತ್ತ ಬಂದಿದ್ದ ಒಂಟಿ ಸಲಗವೊಂದು ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡು ಕೆಲ ಕಾಲ ಪರದಾಡಿದ ಘಟನೆ ಜಿಲ್ಲೆಯ ಮುಳ್ಳೂರು ಗ್ರಾಮದ ಬಳಿ ಜರುಗಿದೆ.

ಗ್ರಾಮದ ಬಳಿ ಹರಿಯುವ ಕಾವೇರಿ ನದಿಯ ಮಧ್ಯ ಭಾಗದಲ್ಲಿ ಒಂಟಿ ಸಲಗ ಬೆಳಗಿನ ಜಾವ 4 ಗಂಟೆ ವೇಳೆಗೆ ಸಿಲುಕಿಕೊಂಡು ಗಾಬರಿಗೊಂಡಿದೆ. ಆಹಾರವನ್ನು ಅರಸಿಕೊಂಡು ನಾಡಿಗೆ ಬಂದಿದ್ದ ಈ ಆನೆ ನೀರು ಕುಡಿಯಲು ಹೋದ ವೇಳೆ ನದಿಯ ಮಧ್ಯ ಭಾಗದಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಗ್ರಾಮಸ್ಥರು ನದಿಯ ಎರಡು ಭಾಗದಲ್ಲಿ ಕಿರುಚಿ ಕುಚೇಷ್ಟೆ ಮಾಡಿದ್ದರಿಂದ ಆನೆ ಮತ್ತಷ್ಟು ಗಾಬರಿಗೊಂಡಿತ್ತು.

ಗ್ರಾಮಸ್ಥರನ್ನು ನೋಡಿ ಗಾಬರಿಗೊಂಡ ಆನೆ ರಭಸವಾಗಿ ಹರಿಯುತ್ತಿದ್ದ ನದಿಯಿಂದ ಹೊರಬರಲಾಗದೆ ಗಾಬರಿಗೊಂಡು ಕಿರುಚಾಡಿದೆ. ಸತತ 4 ಗಂಟೆಗಳ ಕಾಲ ಕಾವೇರಿ ನದಿ ಭಾಗದಲ್ಲಿ ಸಿಲುಕಿದ್ದ ಒಂಟಿ ಸಲಗ, ನದಿಯ ಒಂದು ಮೂಲೆಯ ಮೂಲಕ ಹೊರ ಬಂದು ಕಾಡಿನೊಳಗೆ ಹೊರಟು ಹೋಗಿದೆ.

https://youtu.be/3aFkUnG6_Dc

Share This Article
Leave a Comment

Leave a Reply

Your email address will not be published. Required fields are marked *