ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿ ಹೆಣ್ಣಾನೆ ಸಾವು

Public TV
1 Min Read

ಚಾಮರಾಜನಗರ: ಕೆರೆಗೆ ನೀರು ಕುಡಿಯಲು ಹೋದ ವೇಳೆ ಹೆಣ್ಣಾನೆಯೊಂದು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.

ಬಂಡಿಪುರದ ಕುಂದಗೆರೆ ವಲಯದ ಸಿದ್ರಾಮಯ್ಯನ ಕಟ್ಟೆಯಲ್ಲಿ ಹೆಣ್ಣಾನೆ ನೀರು ಕುಡಿಯಲು ಹೋದ ವೇಳೆ ಈ ಘಟನೆ ಸಂಭವಿಸಿದೆ. ಬೆಳಗಿನ ಜಾವ 4 ಗಂಟೆಯ ವೇಳೆಯಲ್ಲಿ ಹೆಣ್ಣಾನೆಯೊಂದು ನೀರು ಕುಡಿಯಲು ಕೆರೆಯ ಬಳಿ ಹೋಗಿದೆ.

ಬೇಸಿಗೆ ಕಾಲವಾದ್ದರಿಂದ ಕೆರೆಯಲ್ಲಿ ನೀರಿಗಿಂತ ಕೆಸರು ಹೆಚ್ಚಿರುವ ಕಾರಣ ಆನೆ ನೀರಿಗಾಗಿ ಕೆರೆಯ ಮಧ್ಯ ಭಾಗಕ್ಕೆ ಹೋಗಿದೆ. ಈ ವೇಳೆ ಆನೆ ಕೆಸರಲ್ಲಿ ಸಿಲುಕಿದ್ದು, ಮೇಲೆ ಹೇಳಲು ಒದ್ದಾಡಿದೆ. ಕೊನೆಗೆ ಮೇಲೆ ಹೇಳಲು ಸಾಧ್ಯವಾಗದ ಕಾರಣ ಆನೆ ಸುಸ್ತಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ.

ಆನೆ ಮೃತಪಟ್ಟಿದ್ದನ್ನು ಗ್ರಾಮಸ್ಥರು ನೋಡಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *