ಚಾಮರಾಜನಗರ| ಕಾಡಾನೆ ದಾಳಿಗೆ ಟೊಮೆಟೊ, ಬೀನ್ಸ್‌, ಬಾಳೆ ಬೆಳೆ ನಾಶ

Public TV
0 Min Read

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೆನ್ನವಡೆಯನಪುರ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ 10 ಎಕರೆಗೂ ಹೆಚ್ಚು ಫಸಲು ನಾಶವಾಗಿರುವ ಘಟನೆ ನಡೆದಿದೆ.

ಕುಮಾರ ಎಂಬವರಿಗೆ ಸೇರಿದ 2 ಎಕರೆ ಟೊಮೆಟೊ ಹಾಗೂ ಬೀನ್ಸ್, ಶಿವಪ್ಪ ಎಂಬವರಿಗೆ ಸೇರಿದ 2 ಎಕರೆ ಬಾಳೆ ಬೆಳೆ ಮತ್ತು ಸುತ್ತಮುತ್ತಲಿನ 10 ಎಕರೆ ಪ್ರದೇಶದ ಬೆಳೆಯನ್ನು ಆನೆಗಳು ತಿಂದು ತುಳಿದು ನಾಶಪಡಿಸಿವೆ.

ಇಷ್ಟಾದರೂ ಬಂಡೀಪುರದ ಓಂಕಾರ ವಲಯದ ವಲಯಾರಣ್ಯಾಧಿಕಾರಿ ಇತ್ತ ತಲೆ ಹಾಕಿಲ್ಲ ಎಂದು ರೈತರು ಆರೋಪಿಸಿದ್ದಾರೆ.

Share This Article