ಸೊಂಡಿಲಲ್ಲಿ ಹಿಡಿದು ಎಸೆದ ಕಾಡಾನೆ- ಸೋದರಿಯರು ಸೇರಿ ನಾಲ್ವರಿಗೆ ಗಂಭೀರ ಗಾಯ

Public TV
1 Min Read

ಹಾಸನ: ಆನೆ ದಾಳಿಯಿಂದಾಗಿ ಹಾಸನ-ಕೊಡಗು ಜಿಲ್ಲೆ ಗಡಿಭಾಗದ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋದರಿಯರು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಲಲಿತಮ್ಮ, ಪೂರ್ಣಿಮಾ, ಗಂಗಮ್ಮ ಮತ್ತು ಮಂಜ ಗಾಯಗೊಂಡಿವರಾಗಿದ್ದಾರೆ. ಇದರಲ್ಲಿ ಮಂಜ ಮತ್ತು ಲಲಿತಮ್ಮ ಎಂಬವರಿಗೆ ತೀವ್ರ ಗಾಯಗಳಾಗಿವೆ. ಅರಕಲಗೂಡು ತಾಲೂಕು ಹೊಳಲಗೋಡು ಬಳಿಯ ಕಾಫಿ ತೋಟದಲ್ಲಿ ಹತ್ತಾರು ಮಂದಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕಾಣಿಸಿಕೊಂಡ ಸುಮಾರು 10 ವರ್ಷದ ಸಲಗ, ಕಾರ್ಮಿಕರ ಮೇಲೆ ಎರಗಿದೆ.

ಇಬ್ಬರನ್ನು ಸೊಂಡಿಲಲ್ಲಿ ಹಿಡಿದು ಎಸೆದಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದವರು ಜೀವ ಉಳಿಸಿಕೊಳ್ಳಲು ಓಡಿ ಹೋಗುವ ಆತುರದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಸಾಮಾನ್ಯವಾಗಿ ಕೊಡಗು-ಮಲೆನಾಡು ಭಾಗದಲ್ಲಿ ದಾಂಧಲೆ ನಡೆಸಿ ನಷ್ಟ ಉಂಟು ಮಾಡುತ್ತಿದ್ದ ಸಲಗ, ಇದೇ ಮೊದಲ ಬಾರಿಗೆ ಅರಕಲಗೂಡು ಭಾಗದಲ್ಲಿ ಕಾಣಿಕೊಂಡು ಆತಂಕವನ್ನು ಹೆಚ್ಚು ಮಾಡಿದೆ. ಅದರಲ್ಲೂ ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಆನೆ ಹಾವಳಿಯಿಂದ ಜೀವ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *