ಬಾಳೆಹಣ್ಣಿನ ಜೊತೆ ಯುವಕನ ತಲೆ ಜಗಿದ ಸಾಕಾನೆ!

Public TV
1 Min Read

ತುಮಕೂರು: ಮದವೇರಿದ ಸಾಕಾನೆಯೊಂದು ಬಾಳೆ ಹಣ್ಣಿನೊಂದಿಗೆ ಯುವಕನ ತಲೆಯನ್ನೇ ಜಗಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತುಮಕೂರು ತಾಲೂಕಿನ ಕೋರಾ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಈ ಹೃದಯ ವಿದ್ರಾವಕ ಘಟನೆ ಜರುಗಿದೆ. ಈ ಘಟನೆಯಲ್ಲಿ ಆಟೋ ಚಾಲಕನಾಗಿದ್ದ 20 ವರ್ಷದ ಪ್ರತಾಪ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪ್ರತಾಪ್ ಮೊದಲು ಆನೆಗೆ ಬಾಳೆಹಣ್ಣು ಕೊಟ್ಟಿದ್ದಾನೆ. ಸೊಂಡಿಲಿನಲ್ಲಿ ಬಾಳೆಹಣ್ಣು ಸ್ವೀಕರಿಸಿದ ಆನೆ ಬಾಳೆ ಹಣ್ಣಿನೊಂದಿಗೆ ಪ್ರತಾಪನ ತಲೆ ಸಹಿತ ಬಾಯಿಗಿಟ್ಟು ಜಗಿದಿದೆ. ಎರಡು ಬಾರಿ ಜಗಿದ ಪರಿಣಾಮ ತಲೆಗೆ ಪೆಟ್ಟಾಗಿದ್ದು, ಕಿವಿ ಮೂಗು ಕಣ್ಣಿನಿಂದ ರಕ್ತ ಸ್ರಾವವಾಗಿದೆ. ಬಳಿಕ ಯುವಕನನ್ನು ಆನೆ ಎಸೆದಿದೆ. ತಕ್ಷಣ ಸ್ಥಳೀಯರು ಚಿಂತಾಜನಕ ಸ್ಥಿತಿಯಲ್ಲಿದ್ದ ಪ್ರತಾಪನನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವಕನಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದೆ. ಅಂದಹಾಗೆ ಈ ಸಾಕಾನೆ ಪ್ರಬಾಸ್ ಸರ್ಕಸ್ ಕಂಪನಿಗೆ ಸೇರಿದ್ದಾಗಿದೆ. ಸರ್ಕಸ್ ಕಂಪನಿ ವಿರುದ್ಧ ದೂರು ನೀಡಲು ಯುವಕ ಪ್ರತಾಪ್ ಕುಟುಂಬದವರು ಮುಂದಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *