ಬಳ್ಳಾರಿ: ಕರೀಂಲಾಲ್ ತೆಲಗಿ ಜೈಲು ಪಾಲಾಗಿದ್ದ ಛಾಪಾಕಾಗದ ಹಗರಣ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದೇ ರೀತಿಯಲ್ಲಿ ನಕಲಿ ಬಾಂಡ್ ಅಕ್ರಮ ಬಯಲಾಗಿದೆ. ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುತ್ ಕಂಪನಿಗಳು ಮತ್ತು ಗ್ರಾಹಕರು ಮಾಡಿಕೊಳ್ಳುವ ಬಾಂಡ್ಗಳನ್ನು ನಕಲಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಬಳ್ಳಾರಿ, ಬೆಂಗಳೂರಲ್ಲಿ 200 ರೂಪಾಯಿ ಮುಖಬೆಲೆಯ 1,440 ಅಗ್ರಿಮೆಂಟ್ ಬಾಂಡ್ಗಳನ್ನು ಮಾರಾಟ ಮಾಡಲಾಗಿದೆ. ಬಳ್ಳಾರಿ ವಿದ್ಯುತ್ ಗುತ್ತಿಗೆದಾರರ ಸಂಘದ ಹಿಂದಿನ ಕಾರ್ಯದರ್ಶಿ ಖಾದರ್ ಬಾಷಾ, ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಹಾಲಿ ಪ್ರಧಾನ ಕಾರ್ಯದರ್ಶಿ ಲಯನ್ ರುದ್ರೇಶ್ ಈ ದಂಧೆಯಲ್ಲಿ ಪಾಲು ಹೊಂದಿದ್ದಾರೆ ಅನ್ನೋ ಆರೋಪವಿದೆ.
ಈ ಬಗ್ಗೆ ಒಂದು ವರ್ಷದ ಹಿಂದೆಯೇ ಅಂದರೆ ಮೇ 10ರಂದು ಬಳ್ಳಾರಿಯ ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಇದುವರೆಗೆ ಆರೋಪಿಗಳ ವಿಚಾರಣೆ ನಡೆಸಿಲ್ಲ, ಅಕ್ರಮದಲ್ಲಿ ಭಾಗಿಯಾಗಿರೋರನ್ನು ಬಂಧಿಸಿಲ್ಲ. ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿಲ್ಲ. ನಕಲಿ ಬಾಂಡ್ಗಳ ಅಕ್ರಮದ ತನಿಖೆಯಲ್ಲಿ ಪೊಲೀಸರು ವಹಿಸಿರೋ ನಿರ್ಲಕ್ಷ್ಯ ನಾನಾ ಅನುಮಾನಗಳಿಗೆ ಕಾರಣವಾಗಿದೆ.