ಬೆಂಗಳೂರು: ಸಚಿವ ಕೃಷ್ಣ ಭೈರೇಗೌಡ ಅವರು ಮಾಲ್ ಪ್ಲಾಷ್ ಮಾಬ್ ಮೂಲಕ ವಿಶೇಷ ರೀತಿಯಲ್ಲಿ ಮತಯಾಚನೆ ಮಾಡಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಕೃಷ್ಣ ಭೈರೈಗೌಡ ಅವರು, 25 ಕಲಾವಿದರ ತಂಡದಿಂದ ಡ್ಯಾನ್ಸ್ ಮೂಲಕ ಮತದಾನ ಜಾಗೃತಿ ಮಾಡಿಸುವ ಮೂಲಕ ತಮಗೇ ಮತ ನೀಡುವಂತೆ ಮನವಿ ಮಾಡಿದರು. ನಗರದ ಓರಿಯಾನ್ ಮಾಲ್ನಲ್ಲಿ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು.
ಕಳೆದ 15 ವರ್ಷಗಳಿಂದ ರಾಜ್ಯದ ಜನತೆ ನಮ್ಮನ್ನು ನಂಬಿ ಧೈರ್ಯ ತುಂಬಿದ್ದಾರೆ. ಅದ್ದರಿಂದ ನಿಮಗೇ ಧನ್ಯವಾದ ತಿಳಿಸುತ್ತೇನೆ. ಈಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದರಿಂದ ನಿಮ್ಮ ಬೆಂಬಲ ಮತ ನನಗೆ ಬೇಕಿದೆ ಎಂದು ಕೋರಿದರು.