ಜೆಡಿಎಸ್ ನಲ್ಲಿ ಟಿಕೆಟ್‍ಗಾಗಿ ರೇವಣ್ಣಗೂ ಅರ್ಜಿ ಹಾಕುವ ದುರ್ಗತಿ – ಜಮೀರ್ ಹೇಳಿಕೆ ವಿರುದ್ಧದ ಟೀಕೆಗಳು ವೈರಲ್

Public TV
2 Min Read

ಕೋಲಾರ: ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಇರೋವರೆಗೆ ಮಾತ್ರ ಜನತಾದಳ ಪಕ್ಷ ಇರುತ್ತೆ. ಆಮೇಲೆ ಜ್ಯಾತ್ಯಾತೀತ ಜನತಾದಳ ಉಳಿಯಲು ಸಾಧ್ಯವಿಲ್ಲ ಅಂತಾ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಮತ್ತೆ ಹೇಳಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು, ಜೆಡಿಎಸ್‍ನಲ್ಲಿ ಹೆಚ್.ಡಿ. ರೇವಣ್ಣನವರೇ ಟಿಕೆಟ್‍ಗಾಗಿ ಅರ್ಜಿ ಹಾಕಿಕೊಳ್ಳುವ ಪರಿಸ್ಥಿತಿ ಇದೆ. ಇತ್ತೀಚಿಗಿನ ರೇವಣ್ಣ ಮಾತು ಕುಮಾರಸ್ವಾಮಿಯವರನ್ನೇ ಟಾರ್ಗೆಟ್ ಮಾಡಿದಂತಿದೆ ಅಂತ ವ್ಯಂಗ್ಯವಾಡಿದ್ದರು.

ಜಮೀರ್ ಅಹಮದ್ ಅವರು ರೇವಣಣ ಹಾಗೂ ದೇವೇ ಗೌಡ ಅವರ ವಿರುದ್ಧ ನೀಡಿರುವ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣ ಫೆಸ್ ಬುಕ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜಮೀರ್ ಒಬ್ಬ ದ್ರೋಹಿ ಎಂದು ಫೇಸ್ ಬುಕ್ ಬಳಕೆದಾರರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈ ಕುರಿತು ಕರ್ನಾಟಕ ಮಕ್ಕಳ ಕುಮಾರಣ್ಣ ಪೇಜ್ ನಲ್ಲಿ ಚರ್ಚೆ ನಡೆಯುತ್ತಿದ್ದು, ಚಾಮರಾಜಪೇಟೆ ಬಿಟ್ಟು ಬೇರೆಡೆ ನಿಲ್ಲುವಂತೆ ಜಮೀರ್ ಗೆ ಚಾಲೆಂಜ್ ಹಾಕಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜಮೀರ್ ವಿರುದ್ಧದ ಟೀಕೆಗಳು ವೈರಲ್ ಆಗಿವೆ.

ಕರ್ನಾಟಕಕ್ಕೆ ಕುಮಾರಣ್ಣ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಶಾಂತ ಕುಮಾರ ಶೆಟ್ಟಿ ಬರೆದ ಪೋಸ್ಟ್ ನ ಸಂಪೂರ್ಣ ರೂಪ ಇಲ್ಲಿದೆ ಓದಿ..

ಚಾಮರಾಜಪೇಟೆ ಕ್ಷೇತ್ರದಲ್ಲಿ ಉಪೇಂದ್ರ ಅಭ್ಯರ್ಥಿ ಎಂದು ಮೀಡಿಯಾಗಳು ಸುದ್ದಿ ಮಾಡಿದ ಮಾತ್ರಕ್ಕೆ ತಡಬಡಾಯಿಸಿ ಮೀಡಿಯಾ ಕರೆಸಿ ಉಪೇಂದ್ರನಿಗೆ ಸಿನಿಮಾ ರಂಗದಲ್ಲಿ ಮಾರ್ಕೇಟ್ ಬಿದ್ದು ಹೋಗಿದೆ.
ಅದಕ್ಕೆ ರಾಜಕೀಯಕ್ಕೆ ಬಂದಿದ್ದಾನೆ ಎಂದು ಬೆವರುತ್ತಾ ಹೇಳಿಕೆ ನೀಡಿದ್ದ ಒಂದು ಕ್ಷೇತ್ರಕ್ಕೆ ಸೀಮಿತವಾಗಿರುವ ಈ ಮನುಷ್ಯ ಇವತ್ತು ರೇವಣ್ಣರನ್ನು ಸ್ಪರ್ಧೆಗೆ ಬರಲಿ ಮೀಟರ್ ಇದ್ರೇ ಅಂತಾ ಹೇಳುತ್ತಿದ್ದಾನೆ.

ಚಾಮರಾಜಪೇಟೆ ಬಿಟ್ಟು ಉಳಿದ 223 ಕ್ಷೇತ್ರದಲ್ಲಿ ಎಲ್ಲಿಯಾದರು ನಿಂತು ಠೇವಣಿ ಪಡೆಯಲಿ ಸಾಕು. ಕಾಂಗ್ರೆಸಿನ ಭದ್ರ ಕೋಟೆಯಾಗಿದ್ದ ಚಾಮರಾಜಪೇಟೆಯಲ್ಲಿ ನಿನ್ನನ್ನು ಗೆಲ್ಲಿಸಲು ಇದೇ ದೇವೇಗೌಡರು ಮನೆ ಮನೆಗೆ ಸುತ್ತಿ ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದನ್ನು ಆ ಕ್ಷೇತ್ರದ ಮತದಾರರು ಮರೆತಿಲ್ಲಾ ಜಮೀರ್ ಸಾಹೇಬ್ರೇ ಅಲ್ಲಿ ನಿಮ್ಮನ್ನು ಸೋಲಿಸಲು ಕುಮಾರಣ್ಣರಂತ ಹುಲಿ, ರೇವಣ್ಣರಂತಾ ಕಲಿ ಬೇಕಾಗಿಲ್ಲ. ಒಬ್ಬ ಕಾರ್ಪೋರೇಟರ್ ಸಾಕು ನಿನ್ನಂತಾ ನಂಬಿಕೆ ದ್ರೋಹಿ ಗೆ ಬುದ್ದಿ ಕಲಿಸಲು.

Share This Article
Leave a Comment

Leave a Reply

Your email address will not be published. Required fields are marked *