ರಾಯಚೂರಿನಲ್ಲಿ ಮಂಗಳಮುಖಿಯರಿಂದ ಚುನಾವಣಾ ಜಾಗೃತಿ ಜಾಥಾ

Public TV
0 Min Read

ರಾಯಚೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು ಅಂತ ರಾಯಚೂರಿನಲ್ಲಿ ಮಂಗಳಮುಖಿಯರು ಚುನಾವಣೆ ಜಾಗೃತಿ ಜಾಥಾ ನಡೆಸಿದರು.

ನಗರದ ಜಿಲ್ಲಾ ಪಂಚಾಯ್ತಿ ಕಚೇರಿಯಿಂದ ಅಂಬೇಡ್ಕರ್ ವೃತ್ತದವರೆಗೆ ಜಾಗೃತಿ ಫಲಕಗಳನ್ನು ಹಿಡಿದುಕೊಂಡು ಜಾಥಾ ನಡೆಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳದಿಂಗಳ ಮಹಿಳಾ ಒಕ್ಕೂಟ ಸೇರಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಮೂಡಿಸಿದರು.

ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿದವರು ಹಿಂದೇಟು ಹಾಕದೆ ಮತದಾನ ಮಾಡಬೇಕು ಅನ್ನೋ ಕಾರಣಕ್ಕೆ ಜಾಥಾ ನಡೆಸಲಾಯಿತು. ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದರೂ ಮತದಾನದ ಹಕ್ಕು ನಮಗೂ ಇರುವುದರಿಂದ ನಾವು ಓಟ್ ಹಾಕುತ್ತೇವೆ ಅಂತ ಮಂಗಳಮುಖಿಯರು ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *