Bengaluru | ಬಿಎಂಟಿಸಿ ಬಸ್‌ಗೆ ವೃದ್ಧ ಬಲಿ

Public TV
1 Min Read

ಬೆಂಗಳೂರು: ಬಿಎಂಟಿಸಿ ಬಸ್‌ಗೆ (BMTC Bus) 65 ವರ್ಷದ ವೃದ್ಧ ಬಲಿಯಾಗಿರುವ ಘಟನೆ ಮಡಿವಾಳ (Madiwala) ಬಸ್ ನಿಲ್ದಾಣದ ಬಳಿ ನಡೆದಿದೆ.

ವೆಂಕಟರಾಮಪ್ಪ (65) ಮೃತ ವ್ಯಕ್ತಿ. ಬೆಳಗ್ಗೆ 6:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ವೆಂಕಟರಾಮಪ್ಪ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಮಡಿವಾಳ ಮಾರ್ಕೆಟ್ ರೋಡ್‌ಗೆ ತರಕಾರಿ ತರಲು ಹೋದಾಗ ಅಪಘಾತ ನಡೆದಿದೆ. ಸದ್ಯ ವೆಂಕಟರಾಮಪ್ಪ ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿರಿಸಲಾಗಿದೆ. ಇದನ್ನೂ ಓದಿ: ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತದಿಂದ ಯಕ್ಷಗಾನ ಕಲಾವಿದ ಸಾವು

ಮಡಿವಾಳ ಬಸ್ ನಿಲ್ದಾಣದಲ್ಲಿ ತರಕಾರಿ ತೆಗೆದುಕೊಂಡು ಬಂದಿದ್ದ ವೆಂಕಟರಾಮಪ್ಪ ಬಸ್ ಹತ್ತಲು ನಿಂತಿದ್ದರು. ಈ ವೇಳೆ ಎಸ್‌ಎಂಬಿಟಿ ರೈಲ್ವೆ ನಿಲ್ದಾಣದಿಂದ ಸಿಲ್ಕ್ ಬೋರ್ಡ್ಗೆ ಕಾರ್ಯಾಚರಣೆಗೊಳ್ಳುತ್ತಿದ್ದ ಬಿಎಂಟಿಸಿ ಬಸ್ ಫುಟ್‌ಪಾತ್‌ನಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆದಿದೆ. ಮೊದಲು ಟಾಟಾ ಎಸಿ ಗಾಡಿಗೆ ಡಿಕ್ಕಿಯಾಗಿ ಬಳಿಕ ವೆಂಕಟರಾಮಪ್ಪಗೆ ಬಸ್ ಗುದ್ದಿದೆ. ಇದನ್ನೂ ಓದಿ: ನಾನು ಒಂದು ಸುಳ್ಳು ಹೇಳಿದ್ದು ಬಿಟ್ರೆ ಯಾವುದೇ ತಪ್ಪು ಮಾಡಿಲ್ಲ: ಸುಜಾತ ಭಟ್ ಕಣ್ಣೀರು

Share This Article