ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು: ಬಿ.ಸಿ. ನಾಗೇಶ್

Public TV
1 Min Read

ನವದೆಹಲಿ: ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾಳೆಯಿಂದ ಶಾಲೆಗಳಿಗೆ ಸಮವಸ್ತ್ರ ಧರಿಸಿ ಬನ್ನಿ, ಅವರಿವರ ಮಾತನ್ನು ಕೇಳಿ ಒತ್ತಡಕ್ಕೊಳಗಾಗಬೇಡಿ, ನಿಮ್ಮ ಶಿಕ್ಷಣವನ್ನು ಕಳೆದುಕೊಳ್ಳಬೇಡಿ. ಇಂದು ಹೈಕೋರ್ಟ್ ನೀಡಿದ ತೀರ್ಪನ್ನು ಈ ದೇಶದ ಪ್ರಜೆಯಾಗಿರುವ ನಾವು ಪಾಲಿಸಬೇಕು. ಒಂದೆರಡು ದಿನ ನಿಮಗೆ ಮುಜುರ ಆಗಬಹುದು ಆದರೆ ನಂತರ ನಿಮ್ಮ ಸ್ನೇಹಿತರೊಂದಿಗೆ ನೀವು ಬೆರೆಯಲು ಆರಂಭಿಸುತ್ತೀರಾ. ನಮ್ಮಲ್ಲಿ ಯಾವುದೇ ಭೇದ-ಭಾವವಿಲ್ಲ. ಹಿಂದಿನಂತೆಯೇ ನಿಮ್ಮನ್ನು ಶಾಲೆಗೆ ಆಹ್ವಾನಿಸುತ್ತೇವೆ. ನಾಳೆಯಿಂದ ಶಾಲೆಗಳಿಗೆ ಬನ್ನಿ ಎಂದಿದ್ದಾರೆ.

ಸುಪ್ರೀಂ ಕೋರ್ಟ್‍ಗೆ ಹೋಗುವಂತಹ ಹಕ್ಕನ್ನು ಈ ದೇಶ ಎಲ್ಲರಿಗೂ ಕೊಟ್ಟಿದೆ. ಅದನ್ನು ನಾನು ತಪ್ಪು ಎಂದು ಹೇಳಲ್ಲ. ಆದರೆ ಸುಪ್ರೀಂ ಕೋರ್ಟ್‍ಗೆ ಹೋಗಿ ಮಕ್ಕಳು ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಸದ್ಯಕ್ಕೆ ಹೈಕೋರ್ಟ್ ನೀಡಿರುವ ಆದೇಶವನ್ನು ಪಾಲನೆ ಮಾಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳೆದು ಹೋಗಿದ್ದ ಬೆಕ್ಕು 17 ವರ್ಷಗಳ ಬಳಿಕ ಪತ್ತೆ- ಈ ರೋಚಕ ಕಥೆ ಸಖತ್ ಥ್ರಿಲ್ಲಿಂಗ್

ಶಿಕ್ಷಣ ಎಂಬುವುದು ವೈಯಕ್ತಿಕ ವಿಚಾರವಲ್ಲ. ಒಂದೇ ದೇಶ, ಒಂದೇ ರಾಷ್ಟ್ರ ಎಂಬ ಮಾನಸಿಕತೆಯನ್ನು ಕೊಡುವುದು ಸಮವಸ್ತ್ರವಾಗಿದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಹಾಗೆಯೇ ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು. ಅಲ್ಲೂ ತರಗತಿಗಳಲ್ಲಿ ಹಿಜಬ್‍ಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

ಹೈಕೋರ್ಟ್ ತೀರ್ಪುನ ಪ್ರಕಾರ ಶಿಕ್ಷಕರು ಹಿಜಬ್ ಧರಿಸಬೇಕಾ ಬೇಡವೋ ಎನ್ನುವುದನ್ನು ಮುಂದೆ ನಿರ್ಧರಿಸಲಿದ್ದೇವೆ. ಶಿಕ್ಷಕರಿಗೆ ಅಥವಾ ಸರ್ಕಾರಿ ನೌಕರರಿಗೆ ಸಮವಸ್ತ್ರ ಇಲ್ಲ. ಮಕ್ಕಳಿಗೆ ಹಿಜಬ್ ಬೇಡ ಎನ್ನುವಾಗ ಶಿಕ್ಷಕರು ಅದನ್ನು ತರಗತಿಯಲ್ಲಿ ಧರಿಸಿದರೇ ಅದು ಸೂಕ್ತವಾಗಿರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶಾ ಪ್ರಯತ್ನ ಇದಾಗಿತ್ತು: ಕೈ ವಿರುದ್ಧ ಬಿಜೆಪಿ ವಾಗ್ದಾಳಿ

Share This Article
Leave a Comment

Leave a Reply

Your email address will not be published. Required fields are marked *