ಜಿ.ಟಿ ದೇವೇಗೌಡರಿಗೆ ಕೊಟ್ಟಿರುವ ಖಾತೆಯನ್ನು ಪುನರ್ ವಿಮರ್ಶಿಸಬೇಕು: ವಿಶ್ವನಾಥ್

Public TV
0 Min Read

ಮೈಸೂರು:ಜಿಟಿ ದೇವೇಗೌಡರಿಗೆ ಕೊಟ್ಟಿರುವ ಉನ್ನತ ಶಿಕ್ಷಣ ಖಾತೆಯ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು ಎಂದು ಜೆಡಿಎಸ್ ಶಾಸಕ ಹೆಚ್ ವಿಶ್ವನಾಥ್ ಹೇಳಿದ್ದಾರೆ.

ಕುಮಾರಸ್ವಾಮಿಗಳು ಮೈಸೂರು ಜಿಲ್ಲೆಗೆ 2 ಮಂತ್ರಿ ಸ್ಥಾನಗಳನ್ನು ಕೊಡುವುದರ ಮೂಲಕ ಹೆಚ್ಚು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಎರಡು ದೊಡ್ಡ ಇಲಾಖೆಗಳನ್ನೇ ಕೊಟ್ಟಿದ್ದಾರೆ. ಆದರೆ ಜಿಟಿ ದೇವೇಗೌಡರಿಗೆ ಕೊಟ್ಟಿರುವ ಉನ್ನತ ಶಿಕ್ಷಣ ಖಾತೆಯನ್ನು ಪುನರ್ ವಿಮರ್ಶೆ ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಜಿಟಿ ದೇವೇಗೌಡರು ರೈತರ, ಸಾಮಾನ್ಯರ ಜೊತೆ ಬದುಕು ಮಾಡುತ್ತಿರುವ ಮುಖಂಡರು. ಹಾಗಾಗಿ ಉನ್ನತ ಶಿಕ್ಷಣ ಅವರಿಗೆ ಸರಿಹೊಂದಲ್ಲ. ರೈತರ, ಸಾಮಾನ್ಯರ ಜೊತೆ ಇರುವಂತಹ ಇಲಾಖೆಯನ್ನು ಕೊಡುವುದು ಸೂಕ್ತ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *