ಮಿಠಾಯಿ ತಿಂದು 4 ಮಕ್ಕಳು ಸಾವು – ಪರಿಹಾರದ ಭರವಸೆ ನೀಡಿದ ಯೋಗಿ

By
1 Min Read

ಲಕ್ನೋ: ಮನೆಯ ಬಾಗಿಲಲ್ಲಿ ಸಿಕ್ಕ ಮಿಠಾಯಿಯನ್ನು ತಿಂದು ನಾಲ್ಕು ಮಕ್ಕಳು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ನಡೆದಿದೆ.

ಮಂಜನ (5), ಸ್ವೀಟಿ (3), ಸಮರ್ (2), ಹಾಗೂ ಅರುಣ್(5) ಮೃತರು. ದಿಲೀಪ್‍ನಗರದ ನಿವಾಸಿ ಮುಖಿಯಾ ದೇವಿ ಅವರು ಬೆಳಗ್ಗೆ ತಮ್ಮ ಮನೆಯನ್ನು ಗುಡಿಸುವಾಗ ಐದು ಚಾಕ್ಲೇಟ್ ಹಾಗೂ ಕೆಲವು ನಾಣ್ಯಗಳನ್ನು ಒಳಗೊಂಡ ಪ್ಲಾಸ್ಟಿಕ್ ಚೀಲವನ್ನು ದೊರೆತಿತ್ತು. ನಂತರ ಅದರಲ್ಲಿದ್ದ ಚಾಕ್ಲೇಟ್‌ನ್ನು ತಮ್ಮ ಮೂವರು ಮೊಮ್ಮಕ್ಕಳಿಗೆ ಹಾಗೂ ನೆರೆ ಮನೆಯ ಮಗುವಿಗೆ ನೀಡಿದ್ದರು.

ಈ ಚಾಕ್ಲೇಟ್‍ನ್ನು ನಾಲ್ವರು ಮಕ್ಕಳು ಸೇವಿಸಿದ್ದಾರೆ. ಆದರೆ ತಕ್ಷಣ ಅವರೆಲ್ಲರೂ ಅಸ್ವಸ್ಥರಾಗಿ ಪ್ರಜ್ಞಾಹೀನರಾಗಿದ್ದಾರೆ. ಇದರಿಂದಾಗಿ ಆತಂಕಗೊಂಡ ಪಾಲಕರು ತಕ್ಷಣ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದನ್ನೂ ಓದಿ: ಮುಳ್ಳು ಹಂದಿ ಚಿತ್ರದಂತೆ ಕಾಣುವ ವೈದ್ಯರ ಸಹಿ ವೈರಲ್

ಘಟನೆ ಸಂಬಂಧಿಸಿ ಪೊಲೀಸ್ ತನಿಖೆ ಆರಂಭಿಸಲಾಗಿದ್ದು, ಸಾವಿಗೆ ಕಾರಣ ತನಿಖೆ ನಡೆಸಲಾಗುತ್ತಿದೆ. ಉಳಿದ ಒಂದು ಚಾಕ್ಲೇಟ್ ಅನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

ಘಟನೆ ಸಂಬಂಧಿಸಿ ಉತ್ತರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿದ್ದು, ಸೂಕ್ತ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಘಟನೆಗೆ ಸಂಬಂಧಿಸಿ ತನಿಖೆಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದಿದಿ ನಾಡಿನಲ್ಲೇ ಹಿಂಸಾಚಾರ – ಹೆದರಿ ಮನೆ ತೊರೆಯುತ್ತಿರುವ ಜನರು

Share This Article
Leave a Comment

Leave a Reply

Your email address will not be published. Required fields are marked *