ವಿಷ ಸೇವಿಸಿದ ತಂದೆ-ಮಗ: ಪುತ್ರನ ಸ್ಥಿತಿ ಗಂಭೀರ

Public TV
1 Min Read

ಬಾಗಲಕೋಟೆ: ತಂದೆಯ ಕುಡಿತ ವಿಚಾರವಾಗಿ, ತಂದೆ ಹಾಗೂ ಮಗ ಜಗಳವಾಡಿ ಇಬ್ಬರೂ ವಿಷ ಸೇವಿಸಿ ಆಸ್ಪತ್ರೆ ಸೇರಿದ ಘಟನೆ ಸೀಗಿಕೇರಿಯಲ್ಲಿ ಈ ಘಟನೆ ನಡೆದಿದೆ.

50 ವರ್ಷದ ಹೊಳೆಬಸಪ್ಪ ಮಾಚಕನೂರ ಎಂಬವರು ಮೃತ ತಂದೆಯಾಗಿದ್ದು, ಮಗ ಈರಣ್ಣ ಮಾಚಕನೂರ್ ಸ್ಥಿತಿ ಗಂಭೀರವಾಗಿದೆ. ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಈ ತಂದೆ-ಮಗ, ಶನಿವಾರ ಮಧ್ಯರಾತ್ರಿವರೆಗೂ ಗಲಾಟೆ ಮಾಡಿದ್ದಾರೆ.

ದಿನ ಪ್ರತಿ ತಂದೆ ಹೊಳೆಬಸಪ್ಪ ಕಂಠ ಪೂರ್ತಿ ಕುಡಿದು ಗಲಾಟೆ ಮಾಡುತ್ತಿದ್ದ, ಇದ್ರಿಂದ ಬೇಸತ್ತಿದ್ದ ಮಗ ಈರಣ್ಣ, ತಡರಾತ್ರಿ ತಂದೆಯೊಂದಿಗೆ ಜಗಳವಾಡಿದ್ದಾರೆ. ಈರಣ್ಣ ಕುಡಿತದಿಂದ ಬೇಸತ್ತು ವಿಷ ಕುಡಿಯೊದಾಗಿ ತಂದೆ ಹೊಳಬಸಪ್ಪಗೆ ಬೆದರಿಕೆ ಹಾಕಿದ್ದಾರೆ. ಆದರು ಜಗ್ಗದ ಹೊಳಬಸಪ್ಪ ಕುಡಿತ ನಶೆಯಲ್ಲಿ ಗಲಾಟೆ ಮುಂದುವರೆಸಿದ ಹಾಗಾಗಿ ಈರಣ್ಣ ತಂದೆಯ ಎದುರೆ ವಿಷ ಸೇವಿಸಿದ್ದಾರೆ. ಇತ್ತ ಮಗ ವಿಷ ಸೇವಿಸಿದ್ದನ್ನು ಕಂಡು ನಶೆಯಲ್ಲಿದ್ದ ತಂದೆಯೂ ವಿಷ ಸೇವಿಸಿದ್ದಾನೆ.

ಬಳಿಕ ಗ್ರಾಮಸ್ಥರು ಇಬ್ಬರನ್ನು ಬಾಗಲಕೋಟೆ ಕುಮಾರೇಶ್ವರ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವಿಷ ಸೇವಿಸಿದ ತಂದೆ ಹೊಳೆಬಸಪ್ಪ ಮೃತಪಟ್ಟಿದ್ದಾರೆ. ಮಗ ಈರಣ್ಣನ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *