ಬೆಂಗಳೂರು: ದುರ್ಗಾ ಪರಮೇಶ್ವರಿಯಲ್ಲಿ ದೇಗುಲದಲ್ಲಿ ಧರೆಗಿಳಿದ ಧನಲಕ್ಷ್ಮಿ, ಖಾಸಗಿ ದೇಗುಲ ಕೈವಶವಾದ ಒಂದೇ ತಿಂಗಳಲ್ಲಿ ಮುಜರಾಯಿ ಇಲಾಖೆಗೆ ಬಂಪರ್ ಆಫರ್ ಹೊಡೆದಿದೆ.
ವಿದ್ಯಾರಣ್ಯಪುರದ ದುರ್ಗಾಪರಮೇಶ್ವರಿ ದೇಗುಲದ ಹುಂಡಿ ಎಣಿಕೆ ಮಾಡಲಾಗಿದ್ದು, ಅಪಾರ ಪ್ರಮಾಣದ ಕಂತೆ ಕಂತೆ ನೋಟು, ಚಿನ್ನಾಭರಣ ಮತ್ತು ಬೆಳ್ಳಿ ಸಂಗ್ರಹವಾಗಿದೆ. ದೇಗುಲದಲ್ಲಿ ಅವ್ಯವಹಾರ ನಡೆಯುತ್ತಿದ್ದರಿಂದ 1 ತಿಂಗಳ ಹಿಂದೆ ಈ ದೇಗುಲ ಮುಜರಾಯಿ ವಶವಾಗಿತ್ತು. ಬಳಿಕ ದೇಗುಲ ಹಾಗೂ ಟ್ರಸ್ಟಿ ಮಧ್ಯೆ ಕಿತ್ತಾಟ ನಡೆಯುತ್ತಿತ್ತು. ಹೀಗಾಗಿ ಶುಕ್ರವಾರ ಕೋರ್ಟ್ ಮಧ್ಯಪ್ರವೇಶಿಸಿ ಹುಂಡಿ ಎಣಿಕಾ ಕಾರ್ಯಕ್ಕೆ ಅನುವು ಮಾಡಿಕೊಟ್ಟಿತ್ತು.
ಒಂದು ತಿಂಗಳ ಅಂತರದಲ್ಲಿ 12 ಹುಂಡಿಯೂ ಭರ್ತಿಯಾಗಿದ್ದು, ಮುಜರಾಯಿ ದೇಗುಲಗಳ ಲಿಸ್ಟ್ ಗೆ ಇನ್ನೊಂದು ಶ್ರೀಮಂತ ದೇಗುಲ ಸೇರಿದಂತಾಗಿದೆ ಎಂದು ಇಲಾಖೆ ಅಧಿಕಾರಿ ಶ್ರೀಧರ್ ಹೇಳಿದ್ದಾರೆ.
ಹುಂಡಿ ದುಡ್ಡು ಎಣಿಕೆ ವೇಳೆ ಕಿರಿಕ್ ಆಗಬಹುದು ಅಂತ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಕೂಡ ನಿಯೋಜನೆ ಮಾಡಲಾಗಿತ್ತು. ಒಟ್ಟು ಒಂದು ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಲೆಕ್ಕಪತ್ರ ನಿರ್ವಹಣೆ ಸಮಸ್ಯೆಯಿಂದಾಗಿ ಮುಜರಾಯಿ ವಶಕ್ಕೆ ಪಡೆದುಕೊಂಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv