ದುನಿಯಾ ವಿಜಯ್ ಹಲ್ಲೆ, ಕಿಡ್ನ್ಯಾಪ್ ಕೇಸ್ ಹಿಂದಿದೆ ಒಂದು ರೋಚಕ ಕಥೆ

Public TV
1 Min Read

ಬೆಂಗಳೂರು: ನಟ ದುನಿಯಾ ವಿಜಯ್ ಹಲ್ಲೆ, ಕಿಡ್ನ್ಯಾಪ್ ಕೇಸ್ ಹಿಂದೆ ಒಂದು ರೋಚಕ ಕಥೆ ಇದೆ. ಜೀಮ್ ಟ್ರೈನರ್ ಮಾರುತಿಗೌಡನ ಮೇಲೆ ಹಲ್ಲೆ ಮಾಡೋಕೆ ಕಾರಣವಾಗಿತ್ತು ಹತ್ತು ದಿನಗಳ ಹಿಂದೆ ನಡೆದ ಅದೊಂದು ಘಟನೆ. ದುನಿಯಾ ವಿಜಯ್ ಅಂಡ್ ಗ್ಯಾಂಗ್ ಮಾರುತಿ ಗೌಡನ ಮೇಲೆ ಹಲ್ಲೆ ಮಾಡೋಕು ಮುನ್ನ, ಜೀಮ್ ಟ್ರೈನರ್ ಪ್ರಸಾದ್ ಮತ್ತು ಮತ್ತೊಬ್ಬ ಜೀಮ್ ಟ್ರೈನರ್ ಪಾನಿಪುರಿ ಕಿಟ್ಟಿ ಮ್ಯಾಟ್ರು ಇಬ್ಬರ ನಡುವಿನ ಮತ್ಸರ ತಿಳಿದುಕೊಳ್ಳಲೇಬೇಕು.

ಒಟ್ಟಿಗೆ ಜೀಮ್ ನಡೆಸುತ್ತಿದ್ದ ಪ್ರಸಾದ್ ಮತ್ತು ಕಿಟ್ಟಿ ಕೆಲ ಕಾರಣಕ್ಕೆ ಬೇರೆ ಆಗಿದ್ದರು. ಬೇರೆಯಾದ ಮೇಲೂ ಎರಡು ಟೀಂಗಳ ಮಧ್ಯೆ ಕೋಲ್ಡ್ ವಾರ್ ಇತ್ತು. ಎಲ್ಲೇ ಬಾಡಿ ಬಿಲ್ಟ್ ಕಾಂಪೀಟೇಷನ್ ಇದ್ದರೂ ಎರಡು ಕಡೆ ಹುಡುಗರು ಅಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಈ ವೇಳೆ ಪ್ರಸಾದ್ ಮತ್ತು ಪಾನಿಪುರಿ ಕಿಟ್ಟಿ ತಮ್ಮ ಹುಡುಗರ ಪರವಾಗಿ ನಿಂತು ಸಪೋರ್ಟ್ ಮಾಡುತ್ತಿದ್ದರು.

ಹತ್ತು ದಿನಗಳ ಹಿಂದೆ ನಗರದ ಮಲ್ಲೇಶ್ವರಂ ನಲ್ಲಿ ಅದೊಂದು ಬಾಡಿ ಬಿಲ್ಟ್ ಕಾಂಪಿಟೇಷನ್ ನಡೆದಿತ್ತು. ಎಂದಿನಂತೆ ತಮ್ಮ ತಮ್ಮ ಹುಡುಗರಿಗೆ ಸಪೋರ್ಟ್ ಮಾಡಲು ಪ್ರಸಾದ್ ಜೊತೆ ದುನಿಯಾ ವಿಜಯ್ ಬಂದ್ದಿದ್ರೆ, ಪಾನಿಪುರಿ ಕಿಟ್ಟಿ ಜೊತೆಗೆ ಮಾರುತಿ ಗೌಡ ಕೂಡ ಬಂದಿದ್ದರು. ಈ ಸ್ಪರ್ಧೆಯಲ್ಲಿ ಪ್ರಸಾದ್ ಕಡೆಯವರು ಗೆದ್ದು ಪಾನಿಪುರಿ ಕಿಟ್ಟಿ ಕಡೆಯವರು ಸೋತಿದ್ರಂತೆ. ಈ ವೇಳೆ ಎದುರಿನ ಗ್ಯಾಂಗ್ ನ ಅಣಕಿಸುವಂತೆ ದುನಿಯಾ ವಿಜಯ್ ಮತ್ತು ಪ್ರಸಾದ್ ನಡೆದುಕೊಂಡಿದ್ದರು. ಅಲ್ಲದೇ ಕಿಚಾಯಿಸಿದ್ದರು, ಇದರಿಂದ ಮಾರುತಿಗೌಡ ಕೋಪಗೊಂಡಿದ್ದರು.

ಇದೇ ಸಿಟ್ಟಿನಲ್ಲಿದ್ದ ಮಾರುತಿ ಗೌಡ ಶನಿವಾರ ನಡೆದ ಮಿಸ್ಟರ್ ಬೆಂಗಳೂರು ಕಾಂಪೀಟೇಷನ್ ನಲ್ಲಿ ಮಾರುತಿ ಗೌಡ ಹುಡುಗರು ಗೆದ್ದಿದ್ದರು. ಮಲ್ಲೇಶ್ವರಂನಲ್ಲಿ ಮಾಡಿದ್ದ ಅವಮಾನಕ್ಕೆ ಸೇಡು ತೀರಿಸಿಕೊಳ್ಳೋ ಭರದಲ್ಲಿ ದುನಿಯಾ ವಿಜಿಯನ್ನು ಮಾರುತಿ ಗೌಡ ಕೆಣಕಿದ್ದ. ಇದೇ ವಿಚಾರಕ್ಕೆ ಗಲಾಟೆ ನಡೆದು ಹಲ್ಲೆ ಮಾಡಲಾಗಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *