ಕೃಷ್ಣಾ ನದಿಗೆ ಜಿಗಿದು ಕುಡುಕ ವ್ಯಕ್ತಿಯ ಹೈಡ್ರಾಮಾ

Public TV
1 Min Read

ವಿಜಯವಾಡ: ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಕೃಷ್ಣಾ ನದಿಗೆ ಜಿಗಿದು ಹೈಡ್ರಾಮಾ ಮಾಡಿದ ಘಟನೆ ಮಂಗಳವಾರದಂದು ಆಂಧ್ರಪ್ರದೇಶದ ಪ್ರಕಾಶಂ ಬ್ಯಾರೇಜ್ ಬಳಿ ನಡೆದಿದೆ.

ಕುಡಿದ ಮತ್ತಿನಲ್ಲಿ ವ್ಯಕ್ತಿ ನದಿಗೆ ಜಿಗಿದಾಗ ಅಲ್ಲೇ ಇದ್ದ ಪೊಲೀಸರು ಅದನ್ನು ಗಮನಿಸಿ ಅವನನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದರು. ಪೊಲೀಸರು ಆತನನ್ನು ಹಗ್ಗದಿಂದ ಮೇಲೆಳೆಯೋ ವೇಳೆ ವ್ಯಕ್ತಿ ಮತ್ತೆ ನದಿಯಲ್ಲಿ ಜಿಗಿದಿದ್ದಾನೆ. ಸತತ ಮಳೆಯ ಕಾರಣ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರೋದ್ರಿಂದ ಆತ ನದಿಯಲ್ಲಿ ಮುಳುಗಿಬಿಡುತ್ತಾನೆ ಎಂದು ಪೊಲೀಸರು ಹೆದರಿದ್ದರು. ಆದ್ರೆ ಆತ ಬ್ಯಾರೇಜ್‍ನ ಕಂಬವೊಂದನ್ನ ಸಪೋರ್ಟ್‍ಗಾಗಿ ಹಿಡಿದುಕೊಂಡಿದ್ದ.

ಈ ವೇಳೆ ಅಲ್ಲಿದ ಜನರು ನದಿಯಲ್ಲಿ ಜಿಗಿದ ವ್ಯಕ್ತಿಯ ಫೋಟೋ ಹಾಗೂ ವಿಡಿಯೋ ತೆಗೆಯುತ್ತಿದ್ದರು. ಈ ಘಟನೆಯಿಂದ ಬ್ಯಾರೇಜ್ ರಸ್ತೆಯಲ್ಲಿ ಕಿಲೋಮಿಟರ್ ಗಟ್ಟಲ್ಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಅರ್ಧ ಗಂಟೆಯ ನಂತರ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆತ ನೀರಿನಲ್ಲಿ ಜಿಗಿದಿದ್ದು ಯಾಕೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ .

Share This Article
Leave a Comment

Leave a Reply

Your email address will not be published. Required fields are marked *