ಪ್ರಯಾಣಿಕರು ಬೈದಿದ್ದಕ್ಕೆ ಸ್ಥಳದಲ್ಲೇ ಬಸ್ ಬಿಟ್ಟು ಚಾಲಕ ಪರಾರಿ

Public TV
1 Min Read

ತುಮಕೂರು: ಪ್ರಯಾಣಿಕರು ಬೈದಿದ್ದಕ್ಕೆ ಚಾಲಕ ಸ್ಥಳದಲ್ಲೇ ಬಸ್ ಬಿಟ್ಟು ಪರಾರಿಯಾದ ಘಟನೆ ತುಮಕೂರು ಎಪಿಎಂಸಿ ಬಳಿ ನಡೆದಿದೆ.

ಖಾಸಗಿ ಬಸ್ ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ಬಸ್ಸಿನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಚಾಲಕ ನಿದ್ದೆಯಲ್ಲಿದ್ದಕ್ಕೆ ಪ್ರಯಾಣಿಕರು ಬೈದಿದ್ದರು. ಪ್ರಯಾಣಿಕರ ಸಿಟ್ಟಿಗೆ ಚಾಲಕ ಇಂದು ಬೆಳಗ್ಗೆ ತುಮಕೂರು ಎಪಿಎಂಸಿ ಬಳಿ ಬಸ್ ನಿಲ್ಲಿಸಿ ಪರಾರಿ ಆಗಿದ್ದಾನೆ.

ಖಾಸಗಿ ಬಸ್ ಜಿಪಿಆರ್ ಟ್ರಾವೆಲ್ಸ್ ನ ಆಗಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಚಾಲಕ ಬಸ್ ನಿಲ್ಲಿಸಿ ಪರಾರಿಯಾಗಿದ್ದರಿಂದ ಪ್ರಯಾಣಿಕರು ಕೆಲಕಾಲ ಪರದಾಡಿದ್ದರು. ಈ ಬಗ್ಗೆ ಪ್ರಯಾಣಿಕರು ದೂರವಾಣಿ ಕರೆ ಮಾಡಿದರೂ ಟ್ರಾವೆಲ್ಸ್ ಸಿಬ್ಬಂದಿ ಸ್ಪಂದಿಸಿಲ್ಲ. ಪ್ರಯಾಣಿಕರು ಆನ್‍ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು.

ಚಾಲಕ ರಾತ್ರಿಯಿಡೀ ನಿದ್ರೆ ಮಂಪರಿನಲ್ಲಿದ್ದನು. ಹಾಗಾಗಿ ಪ್ರಯಾಣಿಕರು ಆತನನ್ನು ಬೈದಿದ್ದರು. ಖಾಸಗಿ ಟ್ರಾವೆಲ್ಸ್ ಪ್ರಯಾಣಿಕರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *