ಕುಡಿದ ಮತ್ತಿನಲ್ಲಿ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Public TV
1 Min Read

ಆನೇಕಲ್: ಕುಡಿದ ಮತ್ತಿನಲ್ಲಿ ಯುವಕರ ಗುಂಪೊಂದು ಯುವಕನ ಮೇಲೆ ಬಿಯರ್ ಬಾಟಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಂದಗುಡಿಯಲ್ಲಿ ನಡೆದಿದೆ.

ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದ ಆನಂದ್ (23) ಬಿಯರ್ ಬಾಟಲಿನಿಂದ ಇರಿತಕ್ಕೊಳಗಾದ ಯುವಕ. ನಂದಗುಡಿ ಗ್ರಾಮದ ಪಲ್ಲವಿ ಬಾರ್ ಬಳಿ ಘಟನೆ ನಡೆದಿದೆ. ಬಾರ್ ಮುಂದೆ ಕಬಾಬ್ ತೆಗೆದುಕೊಳ್ಳಲು ಹೋದಾಗ ಆನಂದ್ ಮೇಲೆ ಯುವಕರ ಗುಂಪು ಪುಂಡಾಟ ನಡೆಸಿದೆ.

ಕುಡಿದ ಅಮಲಿನಲ್ಲಿ ಅವಾಚ್ಯ ಪದಗಳಿಂದ ಆನಂದ್ ಮೇಲೆ ಕಿರಿಕ್ ತೆಗೆದು ಗಲಾಟೆ ನಡೆಸಿದ್ದಾರೆ. ನೋಡ ನೋಡುತ್ತಿದ್ದಂತೆ ಬಿಯರ್ ಬಾಟಲಿ ಒಡೆದು ಯುವಕನ ಬೆನ್ನಿಗೆ ಚುಚ್ಚಿದ್ದಾರೆ. ನಂದಗುಡಿಯ ರೋಹನ್, ಮಧು, ಚಂದನ್ ಈ ಐವರು ಕೃತ್ಯ ಎಸಗಿದ್ದಾರೆ. ದನ್ನೂ ಓದಿ: ನಾಳೆಯಿಂದ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ಅನುಮತಿ- ವೀಕ್‍ಡೇಸ್‍ನಲ್ಲಿ ಅವಕಾಶ, ವೀಕೆಂಡ್‍ನಲ್ಲಿ ನಿರ್ಬಂಧ

ಪುಂಡರ ಗುಂಪು ಆನಂದ್ ಮೇಲೆ ಹಲ್ಲೆ ನಡೆಸಿ ಬಿಯರ್ ಬಾಟಲಿನಿಂದ ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಆನಂದ್ ಹೊಸಕೋಟೆ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಯುವಕನ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆ ನಡೆಸಿದ ಗುಂಪಿಗಾಗಿ ಶೋಧ ನಡೆಸುತ್ತಿದ್ದಾರೆ. ದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಮಲತಂದೆಯಿಂದಲೇ ಅತ್ಯಾಚಾರ

Share This Article
Leave a Comment

Leave a Reply

Your email address will not be published. Required fields are marked *